ಚಿತ್ರದುರ್ಗದ ಕಲ್ಲಹಳ್ಳಿಯ ಸಮೀಪ ಮರಕ್ಕೆ ಸ್ವಿಫ್ಟ್ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡು ವರ್ಷದ ಮಗು ಸ್ಥಳದಲ್ಲಿ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
ಮೃತಮಗುವನ್ನು ಕಿಶನ್ ರೆಡ್ಡಿ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮಗುವಿನ ತಾಯಿ ಮಾನಸ, ಚಾಲಕ ಅನಿಲ್ ರೆಡ್ಡಿ, ಹಾಗು ಅಜ್ಜಿ ಸುಧಮ್ಮ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನಿಂದ ಚಳ್ಳಕೆರೆ ರಾಮಜೋಗಿಹಳ್ಳಿಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.