ಗದಗ: ಸಮರ್ಪಕ ಕುಡಿಯುವ ನೀರು ಪೂರೈಕೆ ಆಗದ ಹಿನ್ನಲೆ, ಖಾಲಿ ಕೊಡಗಳೊಂದಿಗೆ ಮಹಿಳೆಯರು ಪುರಸಭೆ ಮುತ್ತಿಗೆ ಹಾಕಿದ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ. ಪಟ್ಟಣದಲ್ಲಿ ಕಳೆದ 15 ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಬಂದಿಲ್ಲ. ಮಳೆಗಾಲ ಸಂದರ್ಭದಲ್ಲೂ ನೀರಿಗಾಗಿ ಲಕ್ಷ್ಮೇಶ್ವರ ಪಟ್ಟಣ ಜನ್ರ ಪರದಾಡುವಂತಾಗಿದೆ. ಮನೆಯಲ್ಲಿ ಮಕ್ಕಳು, ವೃದ್ಧರು, ಬಾಣಂತಿಯರು, ಜಾನುವಾರುಗಳು ಇದ್ದವರ ಪರಸ್ಥಿತಿ ಕೇಳತೀರದಾಗಿದೆ.
Aadhaar Card: ಗಮನಿಸಿ.. ಉಚಿತವಾಗಿ ಆಧಾರ್ ಅಪ್ ಡೇಟ್ ಈ ದಿನಾಂಕದೊಳಗೆ ಮಾಡಿಸಿ: ಇಲ್ಲಾಂದ್ರೆ ಶುಲ್ಕ ಗ್ಯಾರೆಂಟಿ!
ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದ್ರೂ ನೀರು ಬಿಟ್ಟಿಲ್ಲ. ಇಂದು ಪುರಸಭೆ ಸಾಮಾನ್ಯ ಸಭೆ ಇತ್ತು. ಈ ವೇಳೆ ಮಹಿಳೆಯರು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ, ಖಾಲಿ ಕೊಡಗಳೊಂದಿಗೆ ಪ್ರತಿಭಟಿಸಿದರು. ಈ ವೇಳೆ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಸದಸ್ಯರಿಗೆ ತರಾಟೆಗೆ ತೆಗೆದುಕೊಳ್ಳುವ ಮೂಲಕ ಚಳಿ ಬಿಡಿಸಿದ್ರು. ಕೂಡಲೆ ನೀರು ಬಿಡದಿದ್ರೆ ಪುರಸಭೆಗೆ ಬೀಗ ಜಡಿಯುವುದಾಗಿ ಎಚ್ಚರಿಕೆ ನೀಡಿದರು. ಕೆಲಕಾಲ ಪುರಸಭೆ ಆವರಣದಲ್ಲಿ ಹೈಡ್ರಾಮಾವೇ ನಡೆಯಿತು. ನಂತರ ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಆಗಮಿಸಿ ಪರಸ್ಥಿತಿ ತಿಳಿಗೊಳಿಸಿದರು.