ಭಾನುವಾರದ ಬಾಡೂಟ ಬಾಯಿ ಚಪ್ಪರಿಸಿಕೊಂಡು ಸವಿಯುತ್ತಿದ್ದ ಬೆಂಗಳೂರಿನ ಮಟನ್ ಪ್ರಿಯರು ಬೆಚ್ಚಿ ಬಿದ್ದಾರೆ.. ಕಳಪೆ ಮಾಂಸದ ದಂಧೆ ವಿಚಾರ ತಿಳಿದು ಜನ ಶಾಕ್ ಆಗಿದ್ದಾರೆ.. ಮಟನ್ ಪ್ರಿಯರು ಹೋಟೆಲ್ ಗಳಿಗೆ ಹೋಗೋಕೆ ಭಯ ಪಡ್ತಿದ್ದಾರೆ. ಇತ್ತ ಪುನೀತ್ ಕೆರೆಹಳ್ಳಿಯನ್ನ ಪೊಲೀಸ್ರು ಅರೆಸ್ಟ್ ಮಾಡಿದ್ರೆ.. ಅತ್ತ ಅಬ್ದುಲ್ ರಜಾಕ್ ರನ್ನ ತೀವ್ರ ವಿಚಾರಣೆ ನಡೆಸಲಾಗಿದೆ…
ಹೌದು.. ನಿನ್ನೆ ಮೆಜೆಸ್ಟಿಕ್ ನಲ್ಲಿ ಪತ್ತೆಯಾದ ಕಳಪೆ ಮಾಂಸ ದಂಧೆ ವಿಚಾರ ಇಡೀ ಬೆಂಗಳೂರಿನ ಜನರನ್ನ ಬೆಚ್ಚಿ ಬೀಳಿಸಿದೆ.. ನಿನ್ನೆ ಮೆಜೆಸ್ಟಿಕ್ ನಲ್ಲಿ ಮಾಂಸದ ಬಾಕ್ಸ್ ಗಳ ಬಳಿ ಪುನೀತ್ ಕೆರೆಹಳ್ಳಿ ಆ್ಯಂಡ್ ಟೀಂ ಒಂದಷ್ಟು ಹೈಡ್ರಾಮ ಮಾಡಿದ್ರು.. ಯಾವಾಗ ಅಲ್ಲಿ ಗಲಾಟೆ ಆಗ್ತಿದೆ ಅಂತಾ ಗೊತ್ತಾಯ್ತೋ ಕೂಡಲೇ ಪೊಲೀಸ್ರು ಸ್ಥಳಕ್ಕೆ ಹೋಗಿದ್ರು.. ಈ ವೇಳೆ ಕಾಟನ್ ಪೇಟೆ ಪೊಲೀಸ್ರು ಪುನೀತ್ ಕೆರೆಹಳ್ಳಿ ಹಾಘು ಆತನ ಸಹಚರರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ರು ಅಂತ ಎರಡು ಎಫ್ ಐ ಆರ್ ದಾಖಲಿಸಿದ್ದಾರೆ. ಪುನೀತ್ ಕೆರೆಹಳ್ಳಿ ಹಾಗು ಸಹಚರ ಮೇಲೆ ಬಿಎನ್ ಎಸ್ 186 ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಬಿಎನ್ ಎಸ್ ಕಾಯ್ದೆ,
131 ಅಪರಾಧವನ್ನ ಕಾಂಪ್ರಮೈಸ್ ಮಾಡಿಕೊಳ್ಳಲು ಯತ್ನಿಸುವುದು ಬಿಎನ್ ಎಸ್ 351 ಯಾವುದೇ ವ್ಯಕ್ತಿಗೆ ಬೆದರಿಕೆ ಹಾಕುವುದು ಈ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲು ಮಾಡಿಕೊಂಡು ಪುನೀತ್ ಕೆರೆ ಹಳ್ಳಿ ಹಾಗು ಆತನ ಸಹಚರರನ್ನು ರಾತ್ರಿ 12ಗಂಟೆ ಸುಮಾರಿಗೆ ಬಂಧಿಸಿದ್ದ ಪೊಲೀಸರು ಠಾಣೆಗೆ ಕರೆದೊಯ್ದಿದ್ರು.. ಪುನೀತ್ ಕೆರೆಹಳ್ಳಿಯನ್ನ ಒಂದಷ್ಟು ಗಂಟೆಗಳ ಕಾಲ ವಿಚಾರಣೆ ಮಾಡಿದ್ರು.. ಬೆಳಗಿನ ಜಾವ 4ಗಂಟೆ ಆಗ್ತಿದ್ದಂತೆಯೇ ಅಸ್ವಸ್ಥತೆ ನಾದಂತೆ ಕಂಡು ಬಂದ ಕರೆಹಳ್ಳಿಯನ್ನು ಕೂಡಲೇ ವಿಕ್ಟೋರಿಯಾಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ..
Geyser: ಗೀಸರ್ ಸ್ವಿಚ್ ಆಫ್ ಮಾಡಲು ಮರೆತು ಆಫೀಸ್ʼಗೆ ಹೋದರೆ ಏನಾಗುತ್ತದೆ ಗೊತ್ತಾ..?
ಮತ್ತೊಂದ್ ಕಡೆ ಈ ದಂಧೆಯ ಆರೋಪ ಬಗ್ಗೆ ಯೂ ಕಾಟನ್ ಪೇಟೆ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದಾಋಎ…ಇನ್ನು ಸ್ಥಳಕ್ಕೆ ಆಗಮಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಬಂದು ತಪಾಸಣೆ ನೆಡೆಸಿ ಕಳಪೆ ಮಾಂಸದ ರೋಪ ಕೇಳಿ ಬಂದಿರೋದ್ರಿಂದ 90ಕ್ಕೂ ಹೆಚ್ಚು ಬಾಕ್ಸ್ಗಳಲ್ಲಿದ್ದ ಮಾಂಸದ ತುಂಡುಗಳನ್ನು ಹೈದರಾಬಾದಿನ ಎಫ್ ಎಸ್ ಎಲ್ ಗೆ ಕಳುಹಿಸಿದ್ದಾರೆ. ಇನ್ನು ಆರೋಪ ಎದುರಿಸುತ್ತಿರುವ ಅಬ್ದುಲ್ ರಜಾಕ್ ಗೆ ನಿನ್ನೆಯೇ ಆರೋಗ್ಯ ಇಲಾಖೆ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಿದ್ರು.. ಇಂದು ಮಧ್ಯಾಹ್ನ 12ಕ್ಕೆ ವಿಚಾರಣೆಗೆ ಹಾಜರಾದ ಅಬ್ದುಲ್ ರಜಾಕ್ ಸುಮಾರು 5-6ಗಂಟೆಗಳ ಕಾಲ ವಿಚಾರಣೆ ನೆಡೆಸಿಸಿದ್ದಾರೆ..
ಮಾಂಸದ ಬ್ಯಿಸಿನೆಸ್ ಬಗ್ಗೆ ದಾಖಲೆ ಸಮೇತ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದ ಆರೋಗ್ಯ ಇಲಾಖೆ ಮಾಮಸವನ್ನು ಎಲ್ಲಿಂದ ತರಿಸಿಕೊಳ್ತಿರೋದು.. ರಾಜಸ್ಥಾನದಲ್ಲಿ ಈ ವ್ಯವಹಾರ ಯಾವ ರೀತಿ ನಡೆಯುತ್ತೆ.. ಎಲ್ಲೆಲ್ಲಿ ಈ ಮಾಂಸ ಡಿಸ್ಟಿಬ್ಯೂಟ್ ಆಗುತ್ತೆ..? ಎಲ್ಲದಕ್ಕೂ ಲೈಸೆನ್ಸ್ ಇದ್ಯಾ..? ಈ ಬ್ಯುಸಿನೆಸ್ ನಲ್ಲಿ ಎಷ್ಟು ಜನ ಇದ್ದೀರಿ.. ಹೀಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.. ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿರೋ ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಇದ್ರೆ ಮತ್ತೆ ಬರ್ಬೇಕು ಅಂತಾ ಸೂಚನೆ ನೀಡಿದ್ದಾರೆ..
ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆ ಡಿಓ ಡಾ ಜನಾರ್ದನ್ ಮಾತನಾಡಿ ಕುರಿ ಮಾಂಸ ಬದಲಿಗೆ ನಾಯಿ ಮಾಂಸ ಸಾಗಾಟ ಮಾಡ್ತಿದ್ರು ಅನ್ನೋದು ಮೇಲ್ಕೋಟಕ್ಕೆ ಹೇಳಕ್ಕಾಗಲ್ಲ. ಹಲವು ದಿನಗಳ ಹಿಂದೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ನಮ್ಮ ಇಲಾಖೆಗೂ ದೂರು ಬಂದಿದೆ. ದೂರಿನನ್ವಯ ನಾವು ತನಿಖೆಗೆ ಮುಂದಾಗಿದ್ದು ಒಂದು ಕಮಿಟಿ ರಚಿಸಲು ಮುಂದಾಗಿದ್ದೇವೆ. ಮಾಂಸ ಸಾಗಾಟಕ್ಕೆ ರಾಜ್ಯ ಆಹಾರ ಸುರಕ್ಷತಾ ಗುಣಮಟ್ಟ ಇಲಾಖೆ ಲೈಸೆನ್ಸ್ ಕೊಡೋದಕ್ಕೆ ಬರೋದಿಲ್ಲ.ಕೇಂದ್ರ FSSAI ನವರು ಮಾತ್ರ ಮಾಂಸ ಸಾಗಾಟಕ್ಕೆ ಲೈಸೆನ್ಸ್ ನೀಡ್ತಾರೆ. ಮಾಂಸದಂಗಡಿಗೆ ಮಾತ್ರ ರಾಜ್ಯ ಆಹಾರ ಗುಣಮಟ್ಟ ಇಲಾಖೆ ಲೈಸೆನ್ಸ್ ನೀಡಲು ಅವಕಾಶವಿದೆ. ಹೀಗಾಗಿ ಇಂದು ಅಬ್ದುಲ್ ರಜಾಕ್ ನನ್ನು ಕಚೇರಿಗೆ ಕರೆಯಲಾಗಿದೆ. ಲೈಸೆನ್ಸ್ ಸೇರಿದಂತೆ ಡಾಕ್ಯುಮೆಂಟ್ಸ್ ತಂದು ಇಲಾಖೆಗೆ ನೀಡುವಂತೆ ಸೂಚಿಸಲಾಗಿದೆ.
ಈಗಾಗಲೆ ಸ್ಯಾಂಪಲ್ ಟೆಸ್ಟ್ ಮಾಡಲು ಲ್ಯಾಬ್ ಗೆ ಇಂದು ಕಳಿಸಲಾಗುತ್ತೆ. 14 ದಿನಗಳೊಳಗೆ ವರದಿ ಇಲಾಖೆ ಕೈ ಸೇರಲಿದೆ, ವರದಿ ಬಂದ ಬಳಿಕ ನಿರ್ಧಾರ ಮಾಡಬಹುದು. ಇಂದು ಆಹಾರ ಗುಣಮಯ ಹಾಗೂ ಸುರಕ್ಷತೆ ಇಲಾಖೆಯಲ್ಲಿ ಆಯುಕ್ತರ ಸಮ್ಮುಖದಲ್ಲಿ ಸಭೆ ನಡೆಯಲಿದೆ. ಮಾಂಸ ಸಾಗಾಟಕ್ಕೆ ಲೈಸೆನ್ಸ್ ಪಡೆಯದಿದ್ದಲ್ಲಿ ಕೇಂದ್ರ FSSAI ಗೆ ಆಯುಕ್ತರು ಪತ್ರ ಬರೆಯಲಿದ್ದಾರೆ. ಈ ಹಿಂದೆಯೂ ದೂರು ಬಂದಾಗ ರೆಸ್ಟೋರೆಂಟ್ ಗಳಿಗೆ ದಾಳಿ ಮಾಡಿದ್ದೆವು. ಆದ್ರೆ ಕುರಿ ಮಾಂಸ ಹೊರತಾಗಿ ಬೇರೆ ಯಾವುದು ಸಿಕ್ಕಿಲ್ಲ. ವರದಿ ಬಳಿಕ ತಪ್ಪು ಕಂಡುಬಂದಲ್ಲಿ ಅಂತವರಿಗೆ ಕಾಯ್ದೆ ಪ್ರಕಾರ 7 ವರ್ಷ ಶಿಕ್ಷೆಯಾಗಲಿದೆ ಎಂದು ಡಾ ಜನಾರ್ಧನ್ ಹೇಳಿದ್ದಾರೆ.
ಮತ್ತೊಂದ್ ಕಡೆ ತೊಂಭತ್ತು ಮಾಂಸದ ಬಾಕ್ಸ್ ಗಳನ್ನ ಪೊಲೀಸರು ಜಪ್ತಿ ಮಾಡಿದ್ದಾರೆ.. ಈಗಾಗಲೇ ಮಾಂಸದ ಸ್ಯಾಂಪಲ್ ಗಳನ್ನ ಲ್ಯಾಬ್ ಗೆ ಕಳಿಸಲಾಗಿದ್ದು ಪರಿಶೀಲನೆ ನಡೆಸಲಾಗ್ತಿದೆ.. ಅಷ್ಟಕ್ಕೂ ಬಾಕ್ಸ್ ನಲ್ಲಿರೋ ಮಾಂಸ ನಿಜಕ್ಕೂ ಬೇರೆ ಪ್ರಾಣಿಯದ್ದಾ..? ಆ ಮಾಂಸದ ಕ್ವಾಲಿಟಿ ಏನು..? ಈ ಬಗ್ಗೆ ಹೆಚ್ಚಿನ ತನಿಖೆ ನಡೀತಿದೆ.. ತನಿಖೆ ನಡೆದ್ಮೇಲೆಯೇ ಅಸಲಿ ಸತ್ಯ ಬಯಲಾಗಲಿದೆ.. ಕಾನೂನು ನಿಯಮ ಮೀರಿದ್ರೆ ಅಬ್ದುಲ್ ರಜಾಕ್ ಗೆ ಕಾನೂನು ಸಂಕಷ್ಟ ಎದುರಾಗಲಿದೆ. ನಿಯಮ ಉಲ್ಲಂಘನೆ ಮಾಡಿದ್ರೆ ಏಳು ವರ್ಷದವರೆಗೆ ಜೈಲು ಶಿಕ್ಷೆ ಸಾಧ್ಯತೆ ಇದೆ. ಸದ್ಯ ಮಾಂಸದ ಕ್ವಾಲಿಟಿ ಬಗ್ಗೆ ಪರಿಶೀಲನೆ ಮಾಡ್ತಿರೋ ಆರೋಗ್ಯ ಅಧಿಕಾರಿಗಳು, ಲ್ಯಾಬ್ ರಿಪೋರ್ಟ್ ಬಂದ ಮೇಲೆ ಮುಂದಿನ ಕ್ರಮಕ್ಕೆ ಮುಂದಾಗಲಿದ್ದಾರೆ.