ಚಿತ್ರದುರ್ಗ: ಮನೆಯಲ್ಲಿದ್ದವರನ್ನ ಕಟ್ಟಿ ಹಾಕಿದ ದರೋಡೆಕೋರು ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ ಘಟನೆ ಹಿರೇಹಳ್ಳಿಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಗಂಡ ಹೆಂಡತಿ ಕೈ ಕಾಲು ಮುರಿದು ದರೋಡೆ ಪ್ರಕರಣ ಮಾಸುವ ಮುನ್ನವೇ ಇನ್ನೊಂದು ಪ್ರಕರಣ ನಡೆದಿದ್ದು, ಕಳ್ಳರ ಈ ಕೃತ್ಯದಿಂದ ಮನೆ ಮಾಲೀಕರು ಬೆಚ್ಚಿ ಬಿದ್ದಿದ್ದಾರೆ. ಚಳ್ಳಕೆರೆ ತಾಲೂಕಿನ ಹಿರೆಹಳ್ಳಿ ಗ್ರಾಮದ ವರ್ತಕ ಜಿ.ಬಿ.ತಿಪ್ಪೇಸ್ವಾಮಿ ಮನೆಗೆ ಮೂರು ಜನ ಕಳ್ಳರು ಸೋಮವಾರ ತಡರಾತ್ರಿ ಮನೆಯ ಬಾಗಿಲು ಮುರಿದು,
Becoming Father: ಏನೇ ಮಾಡಿದ್ರೂ ಅಪ್ಪ ಆಗೋಕೆ ಆಗ್ತಿಲ್ವಾ..? ಹಾಗಾದ್ರೆ ಪುರುಷರೇ ಈ ಆಹಾರ ತಿನ್ನಿ!
ಒಳ ನುಗ್ಗಿ ತಿಪ್ಪೇಸ್ವಾಮಿಯನ್ನ ಹಗ್ಗದಿಂದ ಕೈ ಕಟ್ಟಿ ಹಾಕಿ ಮನೆಯಲ್ಲಿದ್ದ ಒಡವೆ ಹಣ ನೀಡದಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ. ಮಗನ ಕೋಣೆಯಲ್ಲಿದ್ದ 2500 ರೂ ಹಾಗೂ ಬೀರುವಿನಲ್ಲಿದ್ದ ಸುಮಾರು 6.5 ಲಕ್ಷ ರೂ ಕದ್ದು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ. ಬೆರಳಚ್ಚು ತಜ್ಞರು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನ, ಡಿವೈಎಸ್ಪಿ ರಾಜಣ್ಣ ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಪತ್ತೆಗಾಗಿ ಬಲೆ ಬೀಸಿದ್ದು ತಳಕು ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.