ಬೆಂಗಳೂರು: ಗ್ಯಾರಂಟಿಗಳಿಂದ ಆರ್ಥಿಕ ವಿಪತ್ತು, ಗ್ಯಾರಂಟಿ ರದ್ದಿಗೆ ಸೂಚಿಸಿ ಎಂದು ಕೇಂದ್ರಕ್ಕೆ ಶಾಸಕ ಯತ್ನಾಳ್ ಪತ್ರ ಬರೆದ ವಿಚಾರ ಸಂಬಂಧಿಸಿದಂತೆ ಯತ್ನಾಳ್ ವಿರುದ್ಧ ಗೃಹ ಸಚಿವ ಜಿ. ಪರಮೇಶ್ವರ್ ಅವರು ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜ್ಯದ ಆಡಳಿತ ನಡೆಸಲು ಜನ ನಮ್ಮನ್ನು ಆರಿಸಿದ್ದಾರೆ, ಅವರನ್ನಲ್ಲ..ಕೇಂದ್ರದಲ್ಲಿ ಅವರಿಗೆ ಆಡಳಿತ ನಡೆಸಲು ಜನ ಅವಕಾಶ ಕೊಟ್ಟಿದ್ದಾರೆಅವರು ಅಲ್ಲಿ, ನಾವು ಇಲ್ಲಿ ಆಡಳಿತ ನಡೆಸ್ತೇವೆ ಅವರು ಪತ್ರ ಬರೆದಿದ್ದಾರೆ, ಕೇಂದ್ರದ ನಿರ್ದೇಶನ ಬರಲಿ ನೋಡ್ತೇವೆ
CM Meeting: ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಅಧಿಕಾರಿಗಳ ಜೊತೆ ಸಿಎಂ ಮೀಟಿಂಗ್!
ಗ್ಯಾರಂಟಿಗಳಿಂದ ಆರ್ಥಿಕ ಮುಗ್ಗಟ್ಟು ಇದೆ ಅನ್ನೋದು ಬಿಜೆಪಿಯವರ ಆರೋಪಕ್ಕೆ ಮಾತನಾಡಿದ ಅವರು, ಅದನ್ನ ಆಡಳಿತ ನಡೆಸುವ ನಾವು ಹೇಳಿಲ್ಲವಲ್ಲ ನಾವು ನಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಏನು ಮಾಡಬೇಕೋ ಅದಕ್ಕಾಗಿ ಗ್ಯಾರಂಟಿ ಜಾರಿ ಮಾಡಿದ್ದೇವೆ ಸಮಸ್ಯೆ ಏನಾದರೂ ಬಂದರೆ ಅದನ್ನು ಪರಿಹರಿಸುವ ಜವಾಬ್ದಾರಿ ನಮ್ಮದೇ 58 ಸಾವಿರ ಕೋಟಿ ರೂ ಹಣವನ್ನು ನಾವು ಗ್ಯಾರಂಟಿಗಳಿಗೆ ಖರ್ಚು ಮಾಡ್ತಿದ್ದೇವೆ
ಗ್ಯಾರಂಟಿಗಳ ಸಾಧಕ- ಬಾಧಕ ನಾವೇ ನೋಡ್ಕೋತೇವೆ ಇದರಲ್ಲಿ ಬಿಜೆಪಿಯವರ ಸಲಹೆ ಸೂಚನೆ ನಮಗೆ ಬೇಕಾಗಿಲ್ಲ ಅಕ್ಕಿ ಖರೀದಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಟೀಕೆ ವಿಚಾರ ಪತ್ರ ಬರೆಯಲಿ ಮಾನ್ಯ ಜೋಷಿಯವರು ನಾವು ಅವರ ಪತ್ರಕ್ಕೆ ಯಾವ ರೀತಿ ಸ್ಪಂದಿಸ್ತೇವೆ ಅಂತ ಅವರಿಗೆ ಗೊತ್ತಾಗುತ್ತೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ತಿಳಿಸಿದರು.