ಬೆಂಗಳೂರು: ಇಂದು ನಾನು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿಲ್ಲ, ಪ್ರಸಂಗ ಬಂದರೆ ವ್ಯಕ್ತಪಡಿಸುತ್ತೇನೆ ನಾನು ದುರಾಡಳಿತವನ್ನ ಸಹಿಸೋದಿಲ್ಲ ಹಾಗೆ ಗೌರವ ಇಲ್ಲದ ಕಡೆ ನಾವು ಯಾಕೆ ಇರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ ತಿಳಿಸಿದ್ದಾರೆ.
ಇಂದು ನಡೆದ ಕೆಪಿಸಿಸಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಬೋರ್ಡ್ ನಲ್ಲಿ ದುರಾಡಳಿತ ನಡೆಯುತ್ತಿದೆ ಆ ಬೋರ್ಡ್ ಗೆ ನಾನು ಹೆಡ್ ಆದರೆ ಅಲ್ಲಿ ವ್ಯವಸ್ಥೆ ಸರಿಯಿಲ್ಲ ಲಾಸ್ಟ್ ಟೈಮ್ ಸಿಐಡಿಗೆ ಕೊಡಬೇಕೆಂದು ಸಚಿವರು ಹೇಳಿದ್ದಾರೆ ಅಲ್ಲಿ ಪರಿಶೀಲನೆ ಮಾಡುವ ಹಕ್ಕು ಇಲ್ಲದಂತಹ ದುರಾಡಳಿತ ನಡೆದಿದೆ
ವಾಲ್ಮೀಕಿ ಬೋರ್ಡ್ ವ್ಯವಸ್ಥೆ ನೋಡಿದ್ದೇವೆ ಅದಕ್ಕಿಂತ ಕೆಟ್ಟ ವ್ಯವಸ್ಥೆ ಆಗುವುದು ಬೇಡ ಎಲ್ಲದಕ್ಕೂ ಪತ್ರವನ್ನು ನಾನು ಕೊಟ್ಟಿದ್ದೇನೆ ಪ್ರತಿಯೊಂದಕ್ಕೂ ಪತ್ರ ಕೊಟ್ಟಿದ್ದೇನೆ
ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿಕೆ ಹಾಕಿದ ಆ್ಯಕ್ಷನ್ ಪ್ಲ್ಯಾನ್ ಏನೇನು?
ನಾನು ದೆಹಲಿಗೆ ಹೋಗಿದ್ದು ನಿಜ ಪಕ್ಷದ ಮುಖಂಡರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇನೆ ಎಲ್ಲಾ ಕಂಪನಿಗಳ ಬಗ್ಗೆ ತನಿಖೆ ಆಗಬೇಕು
ಯಾವ ಕಂಪನಿಗಳು ಗೋಲ್ ಮಾಲ್ ಮಾಡಿವೆಯೋ ಅಂತಹ ಕಂಪನಿಗಳನ್ನು ಬ್ಲಾಕ್ ಲಿಸ್ಟ್ ಗೆ ಹಾಕಲಿ
ತನಿಖೆಗೆ ಎಂದು ನಾನು ಪತ್ರ ಕೊಟ್ಟು ಎರಡೂವರೆ ತಿಂಗಳು ಆಗಿದೆ ಇದರಲ್ಲಿ 10-15 ಕಂಪನಿಗಳು ಇವೆ ಮಂತ್ರಿಗಳಿಗೆ ಬೇಡವಾದ ಕಂಪನಿಗಳನ್ನ ಬ್ಲಾಕ್ ಲಿಸ್ಟ್ ಗೆ ಹಾಕುವುದು
ಮಂತ್ರಿಗಳ ಆಪ್ತರ ಕಂಪನಿಗಳು ಹೋಗುವುದು ( ಟೆಂಡರ್ ಆಗುವುದು ಬೇಡ) ಅದು ಸೂಕ್ತವಲ್ಲ, ಸಮಯ ಬಂದಾಗ ಮಾತಾಡುತ್ತೇನೆ ಇದನ್ನ ಮುಖ್ಯಮಂತ್ರಿಗಳ ಗಮನಕ್ಕೆ ಹಲವಾರು ಬಾರಿ ತಂದಿದ್ದೇನೆ ಇಂತಹದನ್ನು ನಾವು ಸಹಿಸಿಕೊಳ್ಳುವುದಿಲ್ಲ
ಸಿಎಂ ,ಡಿಸಿಎಂ ಬದಲಾವಣೆ ವಿಚಾರ ಶಾಸಕರಿಗೆ ನೋಟಿಸ್ ನೀಡುವ ವಿಚಾರ ಬಗ್ಗೆ ಮಾತನಾಡಿದ ಅವರು, ಪದಾಧಿಕಾರಿಗಳು, ಶಾಸಕರು ಆಗಲಿ ಪಕ್ಷದ ವಿರುದ್ಧ ಕೆಲಸ ಮಾಡಿದವರಿವೆ ನೋಟಿಸ್ ಕೊಡಬೇಕು ಶಿಸ್ತು ಕ್ರಮ ಜರಗಿಸಲು ಇಂದಿನ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ
ನಾವೆಲ್ಲರೂ ಸೇರಿದರೆ ಅವರು ಸಚಿವರು ಅವರೇನು ಮೇಲಿಂದ ಬಂದಿಲ್ಲ ಪ್ರಸಂಗ ಬಂದರೆ ದಾಖಲೆ ಕೊಡುತ್ತೇನೆ ನಾನು ಭಯಪಡುವುದಿಲ್ಲ ಪ್ರಸಂಗ ಬಂದರೆ ಕೊಟ್ಟೆ ಕೊಡುತ್ತೇನೆ ಬಹಿರಂಗವಾಗಿಯೇ ಹೇಳುತ್ತೇನೆ ಗೌರವ ಇಲ್ಲದ ಕಡೆ ನಾವು ಯಾಕೆ ಇರಬೇಕು ರಾಜೀನಾಮೆ ಕೊಡೋದಕ್ಕೂ ಹಿಂದೆಮುಂದೆ ನೋಡೋದಿಲ್ಲ