ಬೆಂಗಳೂರು:- ಮೋಸ ಹೋಗುವವರು ಇರೋತನತ ಮೋಸ ಮಾಡೋರು ಇದ್ದೇ ಇರುತ್ತಾರೆ. ಹೀಗಾಗಿ ನೀವು ಮೋಸ ಹೋಗೋ ಮುನ್ನ ಈ ಸುದ್ದಿ ಮಿಸ್ ಮಾಡ್ದೆ ನೋಡಿ.
ರೇಣುಕಾಸ್ವಾಮಿ ಮರ್ಡರ್ ಕೇಸ್ ಗೆ ಟ್ವಿಸ್ಟ್: ಕೊಲೆಯಾದ ದಿನ ಶೆಡ್ ನಲ್ಲಿದ್ದ MLA ಆಪ್ತ!.. ಯಾರದು!?
ರೈತರೇ ನಿಮ್ಮ ಆಧಾರ್ ಕಾರ್ಡ್, ಜಮೀನು ಪಹಣಿಯನ್ನು ಆಗಾಗ್ಗೆ ಪರಿಶೀಲಿಸಿಕೊಳ್ಳಿ! ಏಕೆಂದರೆ ನಿಮಗೆ ಗೊತ್ತಿಲ್ಲದೆ ನಿಮ್ಮ ಹೆಸರಿನ ಪಹಣಿ ಯಾವುದೋ ಆರೋಪಿಗೆ ಜಾಮೀನು ಕೊಡಿಸಲು ನೆರವಾಗಿರಬಹುದು. ನಿಮ್ಮ ಆಧಾರ್ ಕಾರ್ಡ್ ಕೋರ್ಟ್ನಲ್ಲಿ ಶ್ಯೂರಿಟಿಯಾಗಿ ಸಲ್ಲಿಕೆಯಾಗಿರಲೂಬಹುದು.
ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದವರಿಗೆ ಜಾಮೀನು ಕೊಡಿಸಲು ನ್ಯಾಯಾಲಯದ ಜಾಮೀನು ಶ್ಯೂರಿಟಿಗೆ ನಕಲಿ ದಾಖಲೆಗಳನ್ನು ಸಲ್ಲಿಸಿ ವಂಚಿಸುತ್ತಿರುವ ಜಾಲ ಪುನಃ ಸಕ್ರಿಯವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಪೋಕ್ಸೊ ಆರೋಪಿಯೊಬ್ಬನ ಜಾಮೀನಿಗೆ ಪ್ರಯತ್ನಿಸಿರುವುದು ಬಯಲಾಗಿದೆ.
ಅದೃಷ್ಟವಶಾತ್ ನ್ಯಾಯಾಧೀಶರ ಸಮಯ ಪ್ರಜ್ಞೆಯಿಂದ ಎಎಸ್ಐ ಕಾನೂನು ಸಂಕಷ್ಟದಿಂದ ಪಾರಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಸಿದ್ದಾಪುರ ಠಾಣೆಯಲ್ಲಿ ದಾಖಲಾಗಿದ್ದ ಪೋಕ್ಸೊ ಪ್ರಕರಣದ ಆರೋಪಿ ನವೀದ್ ಪಾಷಾ ಎಂಬಾತನ ಜಾಮೀನಿಗೆ ಎಸ್.ವಿ. ಗೌಡಯ್ಯ (32) ಜಮೀನು ಶ್ಯೂರಿಟಿ ನೀಡಿದ್ದು, ದಾಖಲೆಗಳನ್ನು ನಗರದ 3ನೇ ಪೋಕ್ಸೊ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನ್ಯಾಯಾಲಯ ಶ್ಯೂರಿಟಿ ದಾಖಲೆಗಳ ಅಸಲೀಯತ್ತು ಪರಿಶೀಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು
ಶ್ಯೂರಿಟಿ ನೀಡಿದ್ದ ಎಸ್.ವಿ. ಗೌಡಯ್ಯ ಹೆಸರಿನ ಆಧಾರ್ ಕಾರ್ಡ್ ವಿಳಾಸ ಬೆನ್ನತ್ತಿದ್ದ ಪೊಲೀಸರು, ದೊಡ್ಡಬಳ್ಳಾಪುರ ತಾಲೂಕು ಸಾಸಲು ಹೋಬಳಿ ಸೂಲಕುಂಟೆ ಗ್ರಾಮ ವಿಳಾಸಕ್ಕೆ ತೆರಳಿದಾಗ ಅಸಲಿ ಸತ್ಯ ಬಯಲಾಗಿತ್ತು. ಆಧಾರ್ ಕಾರ್ಡ್ನಲ್ಲಿದ್ದ ಎಸ್.ವಿ. ಗೌಡಯ್ಯ (69) ನಿವೃತ್ತ ಎಎಸ್ಐ ಆಗಿದ್ದು ಅವರ ಹೆಸರಿನಲ್ಲಿಯೇ ನಕಲಿ ಆಧಾರ್ ಕಾರ್ಡ್, ಜಮೀನು ದಾಖಲೆ ಸೃಷ್ಟಿಸಿ ನಕಲಿ ಶ್ಯೂರಿಟಿ ಕೊಟ್ಟಿರುವುದು ಗೊತ್ತಾಗಿತ್ತು
2015ರಲ್ಲಿನಿವೃತ್ತರಾದ ಎಸ್.ವಿ. ಗೌಡಯ್ಯ ತಮ್ಮ ಸ್ವಂತ ಊರು ಸೂಲುಕುಂಟೆಯಲ್ಲಿ ಪತ್ನಿ ಜತೆ ನೆಲೆಸಿದ್ದಾರೆ. ಅವರ ಹೆಸರಿನಲ್ಲಿ 17 ಗುಂಟೆ ಜಮೀನಿದೆ. ಈ ಜಮೀನು ದಾಖಲೆಗಳನ್ನು ಕಾವೇರಿ/ಭೂಮಿ ತಂತ್ರಾಂಶದಲ್ಲಿ ಪಡೆದಿರುವ ವಂಚಕರು ಎಸ್.ವಿ. ಗೌಡಯ್ಯ (32) ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಬೇರೊಬ್ಬ ವ್ಯಕ್ತಿಯ ಪೋಟೊ ಹಾಕಿದ್ದರು. ಅವರದ್ದೇ ಹೆಸರಿನಲ್ಲಿರುವ ಜಮೀನು ಪಹಣಿಯೊಂದಿಗೆ ಆರೋಪಿ ನವೀದ್ ಜಾಮೀನಿಗೆ ಶ್ಯೂರಿಟಿ ನೀಡಿದ್ದರು
ಆರೋಪಿಗೆ ಸಲ್ಲಿಸಿದ್ದ ಜಾಮೀನು ಶ್ಯೂರಿಟಿ ದಾಖಲೆಗಳು ನಕಲಿ ಎಂಬುದು ದೃಢಪಟ್ಟಿದ್ದು, ವಂಚಕರನ್ನು ಪತ್ತೆಹಚ್ಚುವ ಸಲುವಾಗಿ ನ್ಯಾಯಾಲಯ ಮುಂದಿನ ಕಾನೂನು ಕ್ರಮ ಜರುಗಿಸುವ ಸಾಧ್ಯತೆಯಿದೆ