ಹಾರ್ದಿಕ್ ಪಾಂಡ್ಯರನ್ನು ರೋಹಿತ್ ಶರ್ಮಾ ಅವರು ಹಾಡಿ ಹೊಗಳಿದ್ದಾರೆ.
ಸರ್ ವಿವಿಯನ್ ರಿಚರ್ಡ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆಯಿತು
ಲೈಂಗಿಕ ಕೇಸ್ ನಲ್ಲಿ ಸೂರಜ್ ರೇವಣ್ಣ.. ನಿಗೂಢ ಸ್ಥಳದಲ್ಲಿ ಮಧ್ಯರಾತ್ರಿ ವಿಚಾರಣೆ!
ಮೊದಲ ವಿಕೆಟ್ಗೆ 39 ರನ್ಗಳನ್ನು ಕಲೆಹಾಕಿದ ಬಳಿಕ ರೋಹಿತ್ ಶರ್ಮಾ (23) ಔಟಾದರು. ಇನ್ನು ವಿರಾಟ್ ಕೊಹ್ಲಿ 37 ರನ್ಗಳ ಕೊಡುಗೆ ನೀಡಿದರೆ, ರಿಷಭ್ ಪಂತ್ 36 ರನ್ಗಳ ಕಾಣಿಕೆಯಿತ್ತರು. ಆ ಬಳಿಕ ಬಂದ ಸೂರ್ಯಕುಮಾರ್ ಯಾದವ್ (6) ಬೇಗನೆ ನಿರ್ಗಮಿಸಿದರೂ, ಶಿವಂ ದುಬೆ 34 ರನ್ ಬಾರಿಸಿದರು. ಇನ್ನು ಹಾರ್ದಿಕ್ ಪಾಂಡ್ಯ ಅಜೇಯ ಅರ್ಧಶತಕ ಸಿಡಿಸಿದರು. ಈ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು.
ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ನಾವು ಇಂದಿನ ಪಂದ್ಯದಲ್ಲಿ ತುಂಬಾ ಚೆನ್ನಾಗಿ ಆಡಿದ್ದೇವೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸಾಂಘಿಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದೇವೆ. ಒಂದು ಯೋಜನೆಯನ್ನು ಪರಿಸ್ಥಿತಿಗೆ ತಕ್ಕಂತೆ ಕಾರ್ಯರೂಪಕ್ಕೆ ತರುವುದು ಮುಖ್ಯವಾಗುತ್ತದೆ. ಹೀಗಾಗಿ ನಮ್ಮ ತಂಡದ ಪ್ರದರ್ಶನ ತೃಪ್ತಿ ನೀಡಿದೆ ಎಂದು ಹೇಳಿದ್ದಾರೆ.
ನನ್ನ ಪ್ರಕಾರ, ಟಿ20 ಕ್ರಿಕೆಟ್ನಲ್ಲಿ ಎಲ್ಲಾ ಬ್ಯಾಟರ್ಗಳು ಅರ್ಧಶತಕ ಗಳಿಸಬೇಕೆಂದಿಲ್ಲ. ಒಬ್ಬ ಬ್ಯಾಟರ್ ಅರ್ಧಶತಕ ಬಾರಿಸಿದರೂ ನಾವು 196 ರನ್ಗಳಿಸಿದ್ದೇವೆ. ಹೀಗಾಗಿ ಇದೇ ಮಾದರಿಯಲ್ಲಿ ನಮ್ಮ ಆಟ ಮುಂದುವರೆಯಬೇಕೆಂದು ನಾನು ಬಯಸುತ್ತೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಇನ್ನು ನಮ್ಮ ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದಾರೆ. ಅದರಲ್ಲೂ ಹಾರ್ದಿಕ್ ಪಾಂಡ್ಯ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಟಾಪ್- 5, 6 ಬ್ಯಾಟರ್ಗಳ ಬಳಿಕ ಹಾರ್ದಿಕ್ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವುದರಿಂದ ಅಂತಿಮ ಓವರ್ಗಳ ಮೂಲಕ ದೊಡ್ಡ ಸ್ಕೋರ್ಗಳಿಸುತ್ತಿದ್ದೇವೆ.
ಹಾರ್ದಿಕ್, ಹಾರ್ದಿಕ್ ಆಗಿರುವುದರಿಂದ ಅವರ ಸಾಮರ್ಥ್ಯ ಏನು ಎಂದು ನಮಗೆ ತಿಳಿದಿದೆ. ಅವರು ನಮಗೆ ಬಹಳ ಮುಖ್ಯವಾದ ಆಟಗಾರ. ಪಾಂಡ್ಯ ಇದೇ ಆಲ್ರೌಂಡರ್ ಆಟವನ್ನು ಮುಂದುವರಿಸಿದರೆ, ನಾವು ಮುಂದಿನ ಹಂತಕ್ಕೇರುವುದರಲ್ಲಿ ಅನುಮಾನವೇ ಇಲ್ಲ ಎಂದಿದ್ದಾರೆ