ಯಲಹಂಕ:-ಬ್ಯಾಟರಾಯನಪುರ ಕ್ಷೇತ್ರದ ರಾಜಕಾಲುವೆಗಳನ್ನು ಕಂದಾಯ ಸಚಿವ ಕೃಷ್ಣಬೈರೇಗೌಡರು ವೀಕ್ಷಣೆ ಮಾಡಿದ್ದಾರೆ.
ಪ್ರೈವೇಟ್ ವೆಹಿಕಲ್ಗಳ ಮೇಲೆ ಸರ್ಕಾರಿ ಲಾಂಛನ, ಚಿಹ್ನೆ ಬಳಸಿದ್ರೆ ಬೀಳುತ್ತೆ ಕೇಸ್..!
ಮಳೆಗಾಲ ಬಂದ ಹಿನ್ನಲೆ ರಾಜಕಾಲುವೆ ಸ್ವಚ್ಛತೆ, ಹೂಳು ತೆಗೆದಿರುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕೆಲವು ಕಡೆ ರಾಜಕಾಲುವೆ ಒತ್ತುವರಿ ಆಗಿರುವ ಕಡೆ ತೆರವಿಗೆ ಆದೇಶ ಹೊರಡಿಸಲಾಗಿದೆ. ಅಲ್ಲದೇ ಆದೇಶವಿದ್ದರೂ ಅಧಿಕಾರಿಗಳು ಕೈಕಟ್ಟಿ ಕುಳಿತ್ತಿದ್ದಾರೆ. ಹೀಗಾಗಿ ಖುದ್ದು ಕಂದಾಯ ಸಚಿವ ಕೃಷ್ಣಬೈರೇಗೌಡರಿಂದ ಬ್ಯಾಟರಾಯನಪುರ ಕ್ಷೇತ್ರದ ರಾಜಕಾಲುವೆ ಗಳ ವೀಕ್ಷಣೆ ಮಾಡಲಾಗಿದೆ.
ಮುಖ್ಯವಾಗಿ ಕಾಫಿಬೋರ್ಡ್ ಲೇಔಟ್, ಜಕ್ಕೂರು ವಾರ್ಡ್, ಕೆಂಪಾಪುರಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಇತ್ತೀಚಿಗೆ ಯಲಹಂಕದ ಪುಟ್ಟೇನಹಳ್ಳಿ ಕೆರೆಗೆ ಹೊಂದಿಕೊಂಡ ತಗ್ಗುಪ್ರದೇಶಗಳಿಗೆ ನೀರು ಅವಾಂತರ ಸೃಷ್ಟಿ ಆಗಿತ್ತು. ಆದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಮಸ್ಯೆ ಇರುವ ಸ್ಥಳಗಳನ್ನು ಸಚಿವರು ಪರಿಶೀಲನೆ ನಡೆಸಿದ್ದಾರೆ.
ಸ್ವಕ್ಷೇತ್ರದಲ್ಲಿ ರಾಜಕಾಲುವೆ ಸರಿ ಪಡಿಸದಿದ್ದರೆ ಜನ ಏನಂತಾರೆರಾಜಕಾಲುವೆಯ ಹೂಳು ತೆಗೆದಿಲ್ಲ. ರಾಜಕಾಲುವೆ ಹರಿಯುತ್ತ ಹರಿಯುತ್ತ ಕಿರಿದಾಗಿದೆ, ದೊಡ್ಡಪ್ರಮಾಣದ ನೀರು ಈ ಕಿರಿದಾದ ಜಾಗದಲ್ಲಿ ಹೇಗೆ ಹರಿಯುತ್ತೆ. ಅಧಿಕಾರಿಗಳು ಏಕೆ ತಮ್ಮ ಜವಾಬ್ದಾರಿಗಳನ್ನು ತಾವು ನಿಭಾಯಿಸುತ್ತಿಲ್ಲ. ಗಿಣಿಗೆ ಹೇಳಿದ ಹಾಗೆ ಹೇಳಿ ತಿಂಗಳಾದರು ರಾಜಕಾಲುವೆಯ ಕಸಕಡ್ಡಿ ಹೂಳು ಸ್ವಚ್ಛಗೊಳಿಸಿಲ್ಲ. ನಿಮ್ಮಬೆನ್ನಿಗೆ ಬಿದ್ದು ಮೇಸ್ರ್ತಿ ರೀತಿ ಕೆಲಸ ಮಾಡಿಸಬೇಕಾ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಕೆಲಸ ಮಾಡಬೇಕಿತ್ತು ಸರ್ , ಮಾಡಿಲ್ಲ, ಮುಂದೆ ಮಾಡ್ತೇವೆ ಎಂದಾಗ ಕೃಷ್ಣಬೈರೇಗೌಡ ಕೆಂಡಾಮಂಡಲವಾಗಿದ್ದಾಗಿದ್ದಾರೆ.
ಯಲಹಂಕ ಬಿಬಿಎಂಪಿ ವಲಯದ ಅಧಿಕಾರಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಕಂದಾಯ ಸಚಿವ ಸ್ಕ್ಷೇತ್ರದ ಬ್ಯಾಟರಾಯನಪುರದಲ್ಲೆ ಹೀಗಾದರೆ ಇನ್ನು ನಾಡಿನ ಗತಿಯೇನು..!?ಯ ಕೃಷ್ಣಬೈರೇಗೌಡರ ಒಂದು ಪ್ರಶ್ನೆಗೂ ಉತ್ತರಿಸದೆ ಯಲಹಂಕ ಬಿಬಿಎಂಪಿ ಅಧಿಕಾರಿಗಳು ಕೈಕಟ್ಟಿ ನಿಂತಿದ್ದರು