ಬೆಂಗಳೂರು: ದೇಶದಲ್ಲಿ ಚುನಾವಣಾ ಮಹಾಸಮರದ್ದೇ ಸುದ್ದಿಯಾದ್ರೆ ನಮ್ಮ ರಾಜ್ಯದಲ್ಲಿ ಮಾತ್ರ ಅತೀ ಹೆಚ್ಚು ಸುದ್ದಿಯಲ್ಲಿರೋದು ಹಾಸನದ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ಪ್ರಕರಣ. ಪ್ರಜ್ವಲ್ ರೇವಣ್ಣ ಕೇಸ್ ಗೆ ಸಂಬಂಧಿಸಿ ಕಳೆದ 25 ದಿನಗಳಿಂದ ಪ್ರತಿದಿನ ಒಂದಿಲ್ಲೊಂದು ಸುದ್ದಿಯಾಗ್ತಾನೆ ಇದೆ. ಇಂದು ರೇವಣ್ಣಗೆ ಒಂದು ಕಡೆ ರಿಲೀಫ್ ಸಿಕ್ರೆ ಇನ್ನೋಂದು ಕಡೆ ಮತ್ತೆ ಡವಡವ ಶುರುವಾಗಿದೆ. ಇನ್ನು ಹೆಚ್ ಡಿ ಕೆ ಇಂದು ಏನೆಲ್ಲಾ ಬಾಂಬ್ ಗಳನ್ನು ಸಿಡಿಸಿದ್ರು ಅನ್ನೋ ಕಂಪ್ಲೀಟ್ ಡೀಟೇಲ್ಸ್ ತೋರಿಸ್ತೀವಿ ನೋಡಿ..
ಕಳೆದ 25 ದಿನಗಳಿಂದ ವಿದೇಶದಲ್ಲಿ ತಲೆ ಮರೆಸಿಕೊಂಡು ತಿರುಗುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಯಾವಾಗ ಎಸೈಟಿ ಮುಂದೆ ಬಂದು ಶರಣಾಗ್ತಾರೆ ಅನ್ನೋದೆ ಇದೀಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೇಯಾಗಿದೆ. ಕಳೆದ 15 ನೇ ತಾರೀಕು ಜರ್ಮನಿಯ ಮ್ಯುನಿಚ್ ನಗರದಿಂದ ಬರಬೇಕಿದ್ದ ಪ್ರಜ್ವಲ್ ಫೈಟ್ ಹತ್ತದೆ ಅಲ್ಲೆ ಉಳಿದುಕೊಂಡಿದ್ದು ಎಸೈಟಿಗೆ ಮತ್ತಷ್ಟು ತಲೆನೋವು ತಂದಿದೆ.
ಇದೀಗ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಪಡೆದುಕೊಂಡಿರೋ ಎಸೈಟಿ ಅಧಿಕಾರಿಗಳು ಕೇಂದ್ರದ ಸಿಬಿಐಗೆ ವಾರಂಟ್ ಪ್ರತಿಯನ್ನು ಕಳಿಸಿದ್ದಾರೆ.. ಎಲ್ಲಾ ದಾಖಲೆಗಳನ್ನು ಪಡೆದುಕೊಂಡಿರೋ ಕೇಂದ್ರ ತನಿಖಾ ಸಂಸ್ಥೆ ಪ್ರಜ್ವಲ್ ರೇವಣ್ಣ ವಿರುದ್ಧ ರೆಡ್ ಕಾರ್ನರ್ ನೋಟೀಸ್ ನೀಡಲು ತಯಾರಿ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.ಈ ಮಧ್ಯೆ ಎಸೈಟಿ ಪ್ರಜ್ವಲ್ ರೇವಣ್ಣ ಅಕೌಂಟ್ ಮೇಲೆ ಕಣ್ಣಿಟ್ಟಿದ್ದು ಅಕೌಂಟ್ ಲಾಕ್ ಮಾಡಿಸಲು ಆಲೋಚಿಸುತ್ತಿದೆ.
ಗಮನಿಸಿ.. ಹೊಸ `APL-BPL’ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!
ಹೊಳೆನರಸೀಪುರದ ಲೈಂಗಿಕ ಕಿರುಕುಳ ಕೇಸ್ ನಲ್ಲಿ ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ. ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ನ ನ್ಯಾಯಪೀಠದ ಮುಂದೆ ಎಸ್ಐಟಿ ಪರ ವಾದ ಮಂಡಿಸಿದ್ದ ಎಸ್ ಪಿಪಿ ಜಾಯ್ನಾ ಕೊಥಾರಿ ಐಪಿಸಿ ಸೆಕ್ಷನ್ 436ರಡಿ ದಾಖಲಾಗಿರುವಂತೆ ಪ್ರಕರಣದಲ್ಲಿ ಜಾಮೀನು ಅರ್ಜಿ ಊರ್ಜಿತವಲ್ಲ. ಈಗಾಗಲೇ ಈ ಪ್ರಕರಣದಲ್ಲಿ ಹೆಚ್.ಡಿ ರೇವಣ್ಣ ಅವರು ಕೋರ್ಟ್ ಮುಂದೆ ಶರಣಾಗಿದ್ದಾರೆ. ಐಪಿಸಿ ಸೆಕ್ಷನ್ 376ರಡಿ ಜೀವಾವಧಿ ಶಿಕ್ಷೆ ಇದೆ. ಇದು ಜಾಮೀನು ರಹಿತ ಅಪರಾಧವಾಗಿದೆ ಎಂಬುದಾಗಿ ವಾದಿಸಿದರು.
ಈ ಬಳಿಕ ಎಸ್ಐಟಿ ಪರ ಎಸ್ ಪಿಪಿ ಅಶೋಕ್ ನಾಯಕ ಕೂಡ ವಾದ ಮಂಡಿಸಿ ಸಿದ್ದರು. ಹೆಚ್.ಡಿ ರೇವಣ್ಣ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡನೆ ಮಾಡಿ ದೂರಿನಲ್ಲಿರುವ ಲೋಪಗಳನ್ನು ಗುರುಮಾಡುವುದರ ಜೊತೆಗೆ ಇದು ರಾಜಕೀಯ ಉದ್ದೇಶಿತ ನಾವು ಜಾಮೀನು ನೀಡ ಬಹುದಾದಂತ ಪ್ರಕರಣಗಳಲ್ಲಿ ಜಾಮೀನು ಕೋರಿದ್ದೇವೆ. ನನ್ನ ಕಕ್ಷಿದಾರನಿಗೆ ಜಾಮೀನು ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.
ವಾದ-ಪ್ರತಿವಾದವನ್ನು ಆಲಿಸಿದಂತ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಇಂದಿಗೆ ಆದೇಶ ಕಾಯ್ದಿರಿಸಿತ್ತು. ಇಂದು ಮದ್ಯಾಹ್ನ 3 ಗಂಟೆಗೆ ಜಾಮೀನು ಅರ್ಜಿಯ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ಎಚ್ ಡಿ ರೇವಣ್ಣಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಪ್ರಕಟಿಸಿದರು. 5 ಲಕ್ಷ ಬಾಂಡ್, ಒಬ್ಬರ ಶೂರಿಟಿಯನ್ನು ಒದಗಿಸುವಂತೆ ಹಾಗು ತನಿಖೆಗೆ ಸಹಕರಿಸುವಂತೆ 42ನೇ ಎಸಿಎಂಎಂ ಕೋರ್ಟ್ ಜಾಮೀನು ಆದೇಶದಲ್ಲಿ ತಿಳಿಸಿದೆ.