ಬೆಂಗಳೂರು: ಪ್ರಜ್ವಲ್ ರೇವಣ್ಣ ವ್ಯಭಿಚಾರದಿಂದ ಪೆನ್ ಡ್ರೈವ್ ಬಂದಿದೆ. ಮಾಡಿದವರು ವಿದೇಶದಲ್ಲಿ ಕುಳಿತಿದ್ದಾರೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಜ್ವಲ್ ಕರೆ ತಂದು ಮಾನ ಮರ್ಯಾದೆ ಉಳಿಸಿಕೊಳ್ಳಬೇಕು. ವಿಡಿಯೋ ಹೊರ ತಂದಿದ್ದು ಕಾರು ಡ್ರೈವರ್. ಅದನ್ನು ಅವನು ಸಹ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.
ವಿಡಿಯೋವನ್ನು ದೇವರಾಜೇಗೌಡಗೆ ಕೊಟ್ಟಿದ್ದೆ ಎಂದು ಕಾರ್ತಿಕ್ ಹೇಳಿದ್ದಾನೆ. ವಿಡಿಯೋಗಳನ್ನು ಸೀಲ್ ಮಾಡಿಕೊಂಡು ಇಟ್ಟುಕೊಂಡಿದ್ದೇನೆ ಎಂದು ದೇವರಾಜೇಗೌಡ ಹೇಳಿದ್ದ. ದೇವರಾಜೇಗೌಡ ಅಮಿತ್ ಶಾ ಜೊತೆಗೂ ಮಾತನಾಡಿದ್ದಾನೆ. ಪ್ರಜ್ವಲ್ ಸಂಸತ್ ಸದಸ್ಯದ ಬಗ್ಗೆಯೂ ದೇವರಾಜೇಗೌಡ ಪ್ರಶ್ನೆ ಮಾಡಿದ್ದ. ನ್ಯಾಯದ ಪರವಾಗಿ ದೇವರಾಜೇಗೌಡ ಇದ್ದಾನೆ ಎಂದು ಆರಂಭದಲ್ಲಿ ನಾವು ಭಾವಿಸಿದ್ದೆವು ಎಂದರು.
ಗಮನಿಸಿ.. ಹೊಸ `APL-BPL’ ರೇಷನ್ ಕಾರ್ಡ್ʼಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!
ದೇವೇಗೌಡರ ಕುಟುಂಬವನ್ನ ಮುಗಿಸಿದ್ದು ಅವರ ಕುಟುಂಬದ ಕುಡಿ ಪ್ರಜ್ವಲ್ ರೇವಣ್ಣ ಮುಗಿಸಿದ್ದಾನೆ. ಕುಮಾರಸ್ವಾಮಿ ಅವರು ಹಿಟ್ ಅಂಡ್ ರನ್ ಮಾಡುತ್ತಾರೆ. ಅವರ ಜೊತೆಯಲ್ಲೇ ನಾವು ಇದ್ದವರು. ಸಾಕ್ಷಿ ಆಧಾರವಾಗಿ ಡಿಕೆಶಿ ವಿರುದ್ಧ ದೂರು ನೀಡಲಿ. ವಿಷಯಾಂತರ ಮಾಡಲು ಈ ರೀತಿಯ ಆರೋಪ ಮಾಡಿದ್ದಾರೆ. ಯಾರೇ ಪೆನ್ ಡ್ರೈವ್ ಬಿಟ್ಟಿದ್ದರು ತನಿಖೆಯಲ್ಲಿ ಸಿಲುಕಿಕೊಳ್ಳುತ್ತಾರೆ. ದೇವರಾಜೇಗೌಡ ಸುದ್ದಿ ಗೋಷ್ಠಿ ಮಾಡಿ ರೇವಣ್ಣರ ವಿರುದ್ಧ ಮಾತಾಡಿದ್ದ ಎಂದು ಹೇಳಿದರು.