ಬೆಂಗಳೂರು:- ಬೆಂಗಳೂರು ಸೇರಿ ರಾಜ್ಯದಲ್ಲಿ ಮೇ 16ರ ವರೆಗೂ ಗುಡುಗು ಸಹಿತ ಮಳೆ ಎಚ್ಚರಿಕೆ ನೀಡಲಾಗಿದೆ.
Virat kohli: ಪಂಜಾಬ್ ಕಿಂಗ್ಸ್ ತಂಡ ಮಾಲೀಕರಿಗೆ ಕ್ಷಮೆಯಾಚಿಸಿದ ಕಿಂಗ್ ಕೊಹ್ಲಿ..! ಕಾರಣ ಇಲ್ಲಿದೆ..
ಇಂದು ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಭಾರೀ ಗಾಳಿಯೊಂದಿಗೆ ಮಳೆ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ದಾವಣಗೆರೆ, ಮಂಡ್ಯ, ಮೈಸೂರು, ಚಾಮರಾಜನಗರ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಗದಗ, ವಿಜಯಪುರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಬಿರುಗಾಳಿ ಸಹಿತ ಸಾಧಾರಣ ಮಳೆ ಸಾಧ್ಯತೆ ಇದೆ
ಬೀದರ್, ಧಾರವಾಡ, ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗದ ಕೆಲವು ಸ್ಥಳಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಮುನ್ಸೂಚನೆ ಲಭ್ಯವಾಗಿದೆ. ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಯಲ್ಲಿ ಸಾಧಾರಣ ಮಳೆ ನಿರೀಕ್ಷೆ ಇದೆ.
ಬೆಂಗಳೂರಿನಲ್ಲಿ ನಿನ್ನೆ ಕೂಡ ವರುಣ ಅಬ್ಬರಿಸಿದ್ದು, ನಗರದ ಹಲವೆಡೆ ಭಾರೀ ಮಳೆಯಾಗಿದೆ. ಆರ್ ಆರ್ ನಗರ ಜ್ಞಾನಭಾರತಿ, ಏರ್ಪೋರ್ಟ್ ರಸ್ತೆ, ಸುಂಕದಕಟ್ಟೆ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ತುಂಬಿ ಮಳೆ ನೀರು ಹರಿದಿದ್ದು, ಮಳೆಯ ಅಬ್ಬರಕ್ಕೆ ತಡ ರಾತ್ರಿ ನಗರ ವಾಸಿಗಳು ಹೈರಾಣಗಿದ್ದಾರೆ.
ಕೆಂಗೇರಿ – 89 ಮಿಮೀ, ಪೀಣ್ಯ ಕೈಗಾರಿಕಾ ಪ್ರದೇಶ – 62 ಮಿಮೀ, ನಾಯಂಡನಹಳ್ಳಿ- 61.5 ಮಿ.ಮೀ, ಹೆಮ್ಮಿಗೆಪುರ – 61 ಮಿಮೀ, ಆರ್.ಆರ್.ನಗರ – 60 ಮಿ.ಮೀ, ಮಾರುತಿ ಮಂದಿರ 51.50ಮಿ.ಮೀ, ವಿದ್ಯಾಪೀಠ – 50ಮಿ.ಮೀ, ಉತ್ತರಹಳ್ಳಿ – 42 ಮಿ.ಮೀ, ಹಂಪಿನಗರ – 39ಮಿ.ಮೀ, ಯಲಹಂಕ – 38.50ಮಿ.ಮೀ, ಜಕ್ಕೂರು – 38 ಮಿ.ಮೀ, ಕೊಟ್ಟಿಗಪಾಳ್ಯ- 33 ಮಿ.ಮೀ, ಕೊಡಿಗೇಹಳ್ಳಿ- 28.50 ಮಿ.ಮೀ, ನಂದಿನಿ ಲೇಔಟ್ – 28 ಮಿ.ಮೀ ಮಳೆಯಾಗಿದೆ.