ದಾವಣಗೆರೆ:- ಯತ್ನಾಳ್ ಬೈದರೆ ನಮಗೂ ಒಳ್ಳೆಯದೇ ಆಗುತ್ತೆ ಎಂದು ವಚನಾನಂದ ಸ್ವಾಮೀಜಿಗಳು ಹೇಳಿದ್ದಾರೆ.
ಪ್ರತಿ ಸೋಮವಾರ ಇಸ್ತ್ರಿ ಇಲ್ಲದ ಬಟ್ಟೆ ಧರಿಸಿ ಬನ್ನಿ..ಉದ್ಯೋಗಿಗಳಿಗೆ ಕಂಪನಿ ಹೀಗೆ ಹೇಳಲು ಕಾರಣ!?
ಕಳ್ಳಸ್ವಾಮಿ ಮಾತು ಕೇಳಬೇಡಿ ಎಂದಿದ್ದ ಯತ್ನಾಳ್ ಮಾತಿಗೆ ಪ್ರತಿಕ್ರಿಯೆ ನೀಡಿ, ಯತ್ನಾಳ್ ಎಂದರೇ ಕಾಮಿಡಿ ಮುತ್ಯಾ, ಹುಚ್ಚು ಮುತ್ಯಾ, ಪಾಗಲ್ ಮುತ್ಯಾ ಆಗಲಿ ಎಂದರು.
ಮುಂದಿನ ದಿನಗಳಲ್ಲಿ ಸಿಎಂ ಆಗುತ್ತೇನೆ ಎಂದು ಹೇಳಿದ್ದಾರೆ. ಅವರನ್ನು ಸಿಎಂ, ಪಿಎಂ, ಹೆಚ್ಎಂ ಮಾಡಲಿ ಎಂದು ಹಾರೈಸುವೆ. ಲಡ್ಡುಮುತ್ಯಾ ಬೈಯುವುದರಲ್ಲಿ ಬಹಳ ಪ್ರಚಲಿತ. ಯತ್ನಾಳ್ ಯಾರಿಗೆಲ್ಲ ಬೈದಿದ್ದಾರೋ ಅವರಿಗೆಲ್ಲ ಒಳ್ಳೆಯದೇ ಆಗಿದೆ. ಆದ್ದರಿಂದ ನಮಗೆ ಬೈಯುವದನ್ನು ಮುಂದುವರಿಸಲಿ ಅದರಿಂದ ನಮಗು ಒಳ್ಳೆದಾಗಲಿದೆ ಎನ್ನುವ ಮೂಲಕ ಬಾಗಲಕೋಟೆ ಭಾಗದ ದೈವೀ ಸ್ವರೂಪ ಲಡ್ಡು ಮುತ್ಯಾರಿಗೆ ವಚನಾನಂದ ಸ್ವಾಮೀಜಿಗಳು ಹೋಲಿಕೆ ಮಾಡಿದ್ದಾರೆ.
ಇನ್ನೂ ಪಂಚಮಸಾಲಿ ಸಮಾಜ ಕೂಡಲ ಸಂಗಮ ಶ್ರೀಗಳಿಗೆ ಋಣಿಯಾಗಿರಬೇಕು. ಬಿಜೆಪಿಗೆ ವೋಟ್ ಹಾಕಬೇಡ ಎಂದು ಇವರಿಗೆ ಯಾರ ಪರ್ಮಿಷನ್ ಕೊಟ್ಟಿದ್ದಾರೆ. ಕಳ್ಳ ಸ್ವಾಮಿ ಮಾತು ಕೇಳಬೇಡಿ, ಎಸಿ ರೂಂ ಸ್ವಾಮೀಜಿ ನಮಗೆ ಬೇಕಾಗಿಲ್ಲ ಎಂದು ಹೇಳುವ ಮೂಲಕ ಹರಿಹರ ವಚನಾನಂದ ಸ್ವಾಮೀಜಿ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದರು