ಆನೇಕಲ್:- ಪೊಲೀಸ್ ಸ್ಟೇಷನ್ ಬಳಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಇಟ್ಟಿರುವ ಘಟನೆ ನಗರದ ನೇಕಲ್ ಪೊಲೀಸ್ ಠಾಣಾ ಮುಂಭಾಗ ಜರುಗಿದೆ. ಕೇಸ್ ಸಂಬಂಧ ಕಾರುಗಳನ್ನ ಪೊಲೀಸರು ಸೀಜ್ ಮಾಡಿದ್ದಾರೆ.
BSY ಮತ್ತು ಅವರ ಮಕ್ಕಳು ನನ್ನ ಬಳಿ ಕ್ಷಮೆ ಕೇಳಬೇಕು.. – ಕೆ ಎಸ್ ಈಶ್ವರಪ್ಪ..!
ಸೀಜ್ ಮಾಡಿ ಸ್ಟೇಷನ್ ಬಳಿ ಕಾರುಗಳು ನಿಲ್ಲಿಸಿದ್ದರು. ಮೊದಲಿಗೆ ಒಂದು ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಬಳಿಕ ಅಕ್ಕಪಕ್ಕದಲ್ಲಿದ್ದ ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಅವಘಡದಿಂದ ಮೂರು ಕಾರುಗಳು ಬೆಂಕಿಗಾಹುತಿಯಾಗಿ ಸುಟ್ಟು ಕರಕಲಾಗಿದೆ. ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಾಧ್ಯತೆ ಇದೆ.
ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಠಾಣಾ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆನೇಕಲ್ ಪೊಲೀಸ್ ಠಾಣಾ ಮುಂಭಾಗ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು.