ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಇಂದು ಪಂದ್ಯ ನಡೆದಿದ್ದು, RCB ಕೇವಲ 1 ರನ್ ಗಳಿಂದ ಸೋಲು ಕಂಡಿದೆ.
ಅವರೊಟ್ಟಿಗೆ ಮಲಗಿದ್ರೆ ಮಾತ್ರ ಸಿನಿಮಾದಲ್ಲಿ ಆಫರ್ ಸಿಗ್ತಿತ್ತು – ಬಾಲಿವುಡ್ ನಟಿಯ ಶಾಕಿಂಗ್ ಹೇಳಿಕೆ!
ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೇಸಿಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ಆದರೆ ಕೆಕೆಆರ್ ಆರಂಭದಿಂದಲೇ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಮತ್ತೊಮ್ಮೆ 200 ರನ್ ಗಡಿ ದಾಟಿತು. ಈ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತವರಿನಲ್ಲಿ 20 ಓವರ್ಗೆ 222 ರನ್ಗಳ ಸವಾಲಿನ ಸ್ಕೋರ್ ಮಾಡಿತು. ಈ ಬೃಹತ್ ಮೊತ್ತದ ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ ತಂಡವು ನಿಗದಿತ 20 ಓವರ್ಗೆ 10 ವಿಕೆಟ್ ನಷ್ಟಕ್ಕೆ 221 ರನ್ ಗಳಿಸುವ ಮೂಲಕ 1 ರನ್ ನಿಂದ ಸೋಲನ್ನಪ್ಪಿದೆ.
ಕೆಕೆಆರ್ ನೀಡಿದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ವಿಲ್ ಜಾಕ್ಸ್ ಮತ್ತು ರಜತ್ ಪಾಟಿದಾರ್ ಉತ್ತಮ ಜೊತೆಯಾಟವಾಡಿದರು. ಈ ಜೋಡಿ ಭರ್ಜರಿ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಈ ವೇಳೆ ವಿಲ್ ಜಾಕ್ಸ್ 32 ಎಸೆತದಲ್ಲಿ 55 ರನ್ ಹಾಗೂ ರಜತ್ ಪಾಟಿದಾರ್ 23 ಎಸೆತದಲ್ಲಿ 52 ರನ್ ಗಳಿಸಿ ಅಬ್ಬರಿಸಿದರು. ಇತ್ತ ವಿರಾಟ್ ಕೊಹ್ಲಿ 18 ರನ್, ಫಾಫ್ ಡುಪ್ಲೇಸಿಸ್ 7 ರನ್, ಕ್ಯಾಮರೂನ್ ಗ್ರೀನ್ 6 ರನ್, ಸುಯಶ್ ಪ್ರಭುದೇಸಾಯಿ 24 ರನ್, ಮಹಿಪಾಲ್ ಲೋಮ್ರೋರ್ 4 ರನ್, ದಿನೇಶ್ ಕಾರ್ತಿಕ್ 25 ರನ್, ಕರ್ಣ ಶರ್ಮಾ 20 ರನ್ ಗಳಿಸಿದರು.
ಕೆಕೆಆರ್ ಪರ ಶ್ರೇಯಸ್ ಅಯ್ಯರ್ ಗರಿಷ್ಠ 50 ರನ್ ಗಳಿಸಿದರು. ಆರ್ಸಿಬಿ ಪರ ಯಶ್ ದಯಾಳ್ ಮತ್ತು ಕ್ಯಾಮರೂನ್ ಗ್ರೀನ್ ತಲಾ 2 ವಿಕೆಟ್ ಪಡೆದರು. RCB ಟಾಸ್ ಗೆದ್ದು ಬೌಲಿಂಗ್ ಮಾಡಲು ನಿರ್ಧರಿಸಿತು. ಆರಂಭಿಕ ಜೋಡಿಯಲ್ಲಿ ಸುನಿಲ್ ನರೈನ್ ರನ್ ಗಳಿಸದಿದ್ದರೂ, ಪೀಲ್ ಸಾಲ್ಟ್ ವಿಧ್ವಂಸಕ ಬ್ಯಾಟಿಂಗ್ ನಡೆಸಿದರು. ಪವರ್ ಪ್ಲೇ ಆದ 4 ಓವರ್ಗಳಲ್ಲಿ ಕೆಕೆಆರ್ ರನ್ 50 ರನ್ ದಾಟಿತು. ಫಿಲ್ ಸಾಲ್ಟ್ ಅವರು 14 ಎಸೆತಗಳಲ್ಲಿ 48 ರನ್ ಗಳಿಸಿ ಇನ್ನಿಂಗ್ಸ್ ಆಡಿ ಔಟಾದರು. ಆ ನಂತರ ರನ್ ರೇಟ್ ಉತ್ತಮವಾಗಿದ್ದರೂ ಕೆಕೆಆರ್ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ಸುನಿಲ್ ನರೈನ್ 10 ರನ್, ರಘುವಂಶಿ 3 ರನ್, ವೆಂಕಟೇಶ್ ಅಯ್ಯರ್ 16 ರನ್ ಗಳಿಸಿ ಔಟಾದರು. ಆದಾಗ್ಯೂ, ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಆರ್ಸಿಬಿ ವಿರುದ್ಧ ಉತ್ತಮವಾಗಿ ಆಡಿದರು. ರಿಂಕು ಸಿಂಗ್ ಅವರಿಗೆ ಉತ್ತಮ ಬೆಂಬಲ ನೀಡಿದರು.
ಅವರು 40 ರನ್ಗಳ ಅಮೂಲ್ಯ ಜೊತೆಯಾಟ ನಡೆಸಿದರು. ರಿಂಕು ಸಿಂಗ್ 14 ರನ್ ಗಳಿಸಿ ಔಟಾದರು. ನಂತರ ಆಂಡ್ರೆ ರಸೆಲ್ ಶ್ರೇಯಸ್ ಅಯ್ಯರ್ ಅವರೊಂದಿಗೆ ಸ್ಕೋರ್ ಬೋರ್ಡ್ 200ರ ಗಡಿ ದಾಟುವಂತೆ ಮಾಡಿದರು. ಶ್ರೇಯಸ್ ಅಯ್ಯರ್ 35 ಎಸೆತಗಳಲ್ಲಿ ಈ ಋತುವಿನ ಮೊದಲ ಅರ್ಧಶತಕ ಸಿಡಿಸಿದರು.ಸ್ಲಾಗ್ ಓವರ್ನಲ್ಲಿ ವೇಗವಾಗಿ ರನ್ ಗಳಿಸುವ ಸಂದರ್ಭದಲ್ಲಿ ಕೆಕೆಆರ್ ನಾಯಕ ಔಟಾದರು. ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 50 ರನ್ ಗಳಿಸಿದರು. ರಮಣದೀಪ್ ಸಿಂಗ್ ಸ್ಲಾಗ್ ಓವರ್ನಲ್ಲಿ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದರು. ಅಂತಿಮವಾಗಿ ಕೆಕೆಆರ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 222 ರನ್ ಗಳಿಸಿತು. ರಮಣದೀಪ್ ಸಿಂಗ್ 9 ಎಸೆತಗಳಲ್ಲಿ 24 ರನ್ ಮತ್ತು ಆಂಡ್ರೆ ರಸೆಲ್ 20 ಎಸೆತಗಳಲ್ಲಿ 27 ರನ್ ಗಳಿಸಿ ಅಜೇಯರಾಗಿ ಉಳಿದರು.