ತುಮಕೂರು:- 2024 ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ದಿನೇ ದಿನೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುಣಿಗಲ್ ನಲ್ಲಿ ರಕ್ತ ಪಾತದ ಚುನಾವಣಾ ಪ್ರಚಾರ ನಿಲ್ಲುತ್ತಿಲ್ಲ.
ಬೆಂ.ಗ್ರಾಮಾಂತರ ಬಿಜೆಪಿ ಅಭ್ಯರ್ಥಿ ಡಾ.ಸಿಎನ್ ಮಂಜುನಾಥ್ ಪರ ಪ್ರಚಾರ ಮಾಡಿದ್ದಕ್ಕೆ ಜೆಡಿಎಸ್ ಗ್ರಾ.ಪಂ ಸದಸ್ಯನ ಮೇಲೆ ಕೊಲೆ ಯತ್ನ ಆರೋಪ ಕೇಳಿ ಬಂದಿದೆ. ಮನೆಯಲ್ಲಿದ್ದವನಿಗೆ ಪದೆ ಪದೆ ಕಾಲ್ ಮಾಡಿ ಕರೆಸಿಕೊಂಡು ಚಾಕುವಿನಿಂದ ಇರಿಯಲು ಯತ್ನಿಸಿ ಮನ ಬಂದಂತೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.
ಗ್ರಾ.ಪಂ ಸದಸ್ಯನ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಮೊನ್ನೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಚಾಕು ಇರಿತ, ಇವತ್ತು ಜೆಡಿಎಸ್ ಗ್ರಾ.ಪಂ ಸದಸ್ಯನ ಮೇಲೆ ಚಾಕು ಇರಿತಕ್ಕೆ ಯತ್ನಿಸಿದ ಆರೋಪ ಕೇಳಿ ಬಂದಿದೆ. ಅದೃಷ್ಟವಶಾತ್ ದಾಳಿಯಿಂದ ಗ್ರಾ.ಪಂ ಸದಸ್ಯ ಪಾರಾಗಿದ್ದಾರೆ. ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಅಂಚೆಪಾಳ್ಯದಲ್ಲಿ ಘಟನೆ ಜರುಗಿದೆ.
ಕುಣಿಗಲ್ ತಾಲೂಕು, ಕೆಂಪನಹಳ್ಳಿ ಗ್ರಾ.ಪಂ ಜೆಡಿಎಸ್ ಸದಸ್ಯ ಮಂಜುನಾಥ್ ಮೇಲೆ ಹಲ್ಲೆ ನಡೆದಿದ್ದು, ಬೋರೆಗೌಡ ಎಂಬುವವನಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ. ಮನೆಯಲ್ಲಿದ್ದ ಮಂಜುನಾಥ್ ಗೆ ಪದೆ ಪದೆ ಕಾಲ್ ಮಾಡಿ ಬೋರೇಗೌಡ ಅಂಚೆಪಾಳ್ಯ ಸರ್ಕಲ್ ಗೆ ಕರೆಸಿಕೊಂಡಿದ್ದ.
ಈ ವೇಳೆ ಡಾ.ಸಿಎನ್ ಮಂಜುನಾಥ್ ಪರ ಯಾಕೆ ಪ್ರಚಾರ ಮಾಡಿತ್ತೀಯ ಎಂದು ಬೋರೇಗೌಡ ಜಗಳ ತೆಗೆದಿದ್ದ.
ನೋಡ ನೋಡುತ್ತಿದ್ದಂತೆಯೇ ಮಂಜುನಾಥ್ ಮೇಲೆ ಮಾರಾಣಾಂತಿಕ ಹಲ್ಲೆ ಆರೋಪ ಕೇಳಿ ಬಂದಿದೆ. ಡಾ.ಮಂಜುನಾಥ್ ಪರ ಕೆಲಸ ಮಾಡದಂತೆ ಧಮಕಿ ಹಾಕಿದ್ದಾರೆ. ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಘಟನೆ ಜರುಗಿದೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.