ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿತಾಲೂಕಿನ ನಾವಲಗಿ ಗ್ರಾಮದ ಆನಂದ ಕಂಪು ಅವರ ಸುಪುತ್ರ ವಿಕಾಸ,ಆನಂದ ಚಿಂಚಖಂಡಿ (ಕಂಪು) ತಮ್ಮ ತೋಟದಲ್ಲಿ ಕೃಷಿ ಕೆಲಸದೊಂದಿಗೆ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 569 ಅಂಕಗಳನ್ನು ಪಡೆಯುವ ಮೂಲಕ ಗ್ರಾಮಕ್ಕೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾನೆ,
ಚಾಮರಾಜನಗರ: ಮಾದಪ್ಪನ ಬೆಟ್ಟಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಆನೆ ದಾಳಿ, ಸ್ಥಳದಲ್ಲೇ ಸಾವು!
ಇತನು ಲೆಕ್ಕಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದು,ಕನ್ನಡ 89.ಇಂಗ್ಲೀಷ 85.ಅರ್ಥಶಾಸ್ತ್ರ 100.ವ್ಯವಹಾರ ಅಧ್ಯಯನ 98.ಸಮಾಜಶಾಸ್ತ್ರ 97.ಲೆಕ್ಕಶಾಸ್ತ್ರ 100. ಪ್ರತಿ ಶತ 94,83 ಅಂಕಗಳನ್ನು ಗಳಿಸಿದ್ದಾನೆ. ಇತನು ಬನಹಟ್ಟಿಯ ಎಸ್ ಆರ್ ಎ ಕಾಲೇಜು ವಿದ್ಯಾರ್ಥಿಯಾಗಿದ್ದು ಈ ವಿದ್ಯಾರ್ಥಿಯು ತನ್ನ ಬಿಡುವಿನ ಸಮಯದಲ್ಲಿ ಪಾಲಕರೊಂದಿಗೆ ತೋಟದಲ್ಲಿ ಕೃಷಿ ಕೆಲಸದಲ್ಲಿ ತೋಡಗಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾನೆ.ಇತನ ಸಾಧನೆಗೆ ಗ್ರಾಮದ ಗುರುಹಿರಿಯರು,ಶಿಕ್ಷಕರು ಯುವ ಮಿತ್ರರು ಅಭಿನಂದಿಸಿದ್ದಾರೆ.
ಪ್ರಕಾಶ ಕುಂಬಾರ
ಬಾಗಲಕೋಟೆ