ಚಾಮರಾಜನಗರ: ಮಾದಪ್ಪನ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಮಹಿಳಾ ಭಕ್ತೆ ಮೇಲೆ ಕಾಡಾನೆಯೊಂದು ದಾಳಿ ನಡೆಸಿ ಕೊಂದಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ದ ಯಾತ್ರಾಸ್ಥಳವಾದ ಮಲೆಮಹದೇಶ್ವರಬೆಟ್ಟಕ್ಕೆ ಮಾದಪ್ಪನ ದರ್ಶನ ಪಡೆಯಲು ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವೇಳೆ ಆನೆ ತಲೆದಿಂಬ ಎಂಬ ಪ್ರದೇಶದಲ್ಲಿ ಏಕಾಏಕಿ ಆನೆ ದಾಳಿ ನಡೆಸಿ ಈ ಘಟನೆ ನಡೆದಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಲೋಕಸಭಾ ಚುನಾವಣೆಗೆ ದಿನಗಣನೆ ಶುರು: ಕಾಂಗ್ರೆಸ್ ವಾಗ್ದಾನ ವಿರುದ್ಧ ಕೆಂಡಕಾರಿದ ಜನತೆ!
ಮೃತ ಲಕ್ಷ್ಮೀಯು ಮಗ ಚಿರಾಗ್ ಸೇರಿ ಸಂಬಂಧಿಕರಾದ ಚಿಕ್ಕತಾಯಮ್ಮ ಮನು ಪ್ರಸನ್ನ, , ಮಹದೇವು, ಪುಟ್ಟರಾಜು ಎಲ್ಲರೂ ಜೊತೆಗೂಡಿ ಮಹದೇಶ್ವರ ಬೆಟ್ಟಕ್ಕೆ ಗೂಡ್ಸ್ ವಾಹನದಲ್ಲಿ ಹೊನಗನಹಳ್ಳಿ ಗ್ರಾಮದಿಂದ ಹೊರಟು ಕೊಳ್ಳೇಗಾಲ ಮಾರ್ಗವಾಗಿ ತಾಳಬೆಟ್ಟಕ್ಕೆ ಆಗಮಿಸಿದ್ದಾರೆ. ನಂತರ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದುಕೊಂಡು ನಂತರ ಮತ್ತೆ ಮಹದೇಶ್ವರ ಬೆಟ್ಟಕ್ಕೆ ಹೊರಡಲು ಹೋದಾಗ ತಾಳಬೆಟ್ಟದ ಹತ್ತಿರ ಸುಮಾರು 10-15 ಜನ ಸಾರ್ವಜನಿಕರು ಪಾದಯಾತ್ರೆಯ ಮೂಲಕ ಮಹದೇಶ್ವರಬೆಟ್ಟಕ್ಕೆ ಹೋಗುತ್ತಿರುವುದನ್ನು ನೋಡಿ ಅವರ ಜೊತೆ ಕಾಲ್ನಡಿಗೆಯಲ್ಲಿ ತಾವು ಕೂಡ ಹೆಜ್ಜೆ ಹಾಕಿದ್ದಾರೆ.
ಮಾರ್ಗ ಮದ್ಯೆ ಅರಣ್ಯ ಪ್ರದೇಶದ ಕಾಲುದಾರಿಯಲ್ಲಿ ನಡೆದುಕೊಂಡು ತೆರಳುತ್ತಿದ್ದಾಗ ಕಾಡಾನೆಯೊಂದು ಏಕಾಏಕಿ ಮೂವರ ಮೇಲೆ ದಾಳಿ ಮಾಡಿದೆ. ಕೂಡಲೆ ಎಚ್ಚೆತ್ತು ಕೆಲ ಪಾದಾಯಾತ್ರೆಗಳು ಅಲ್ಲಿಂದ ಕಾಲ್ಕಿತ್ತರೆ ಇನ್ನೂ
ಇಬ್ಬರು ಒಂದು ಪೊದೆಯ ಒಳಗೆ ಹೋಗಿ ಅವಿತುಕೊಂಡರು. ಮೃತ ಲಕ್ಷ್ಮೀ ಪೊದೆಯ ಅವಿತುಕೊಳ್ಳಲು ಓಡುತ್ತಿದ್ದಾಗ ಕಾಡಾನೆಯು ಲಕ್ಷ್ಮೀಯನ್ನು ಸೊಂಡಲಿನಿಂದ ಬಡಿದು ಕೊಂದು ಕಾಡಿನತ್ತ ಆನೆ ಓಡಿದೆ.
ಈ ವೇಳೆ ಮೃತಳ ಸಂಬಂದಿಕ ಪುಟ್ಟರಾಜು ಲಕ್ಷ್ಮೀ ಹತ್ತಿರ ಹೋಗಿ ನೋಡಿದಾಗ ಕಾಡಾನೆ ದಾಳಿಯಿಂದ ಮುಖ ಹಾಗೂ ತಲೆಯ ಹತ್ತಿರ ರಕ್ತಗಾಯವಾಗಿ ಮೃತಪಟ್ಟಿದ್ದಳು ಎಂದು ತಿಳಿದಿದೆ.
ಮತ್ತೆ ಕಾಡಾನೆ ಬರಬಹುದು ಎಂಬ ಭಯದಿಂದ ಕೂಡಲೇ ತನ್ನ ಹೆಗಲ ಮೇಲೆ ಮೃತ ದೇಹವನ್ನು ಹೊತ್ತಿಕೊಂಡು
ಕಾಡಿನ ರಸ್ತೆಯ ಮಧ್ಯದಲ್ಲಿಯೇ ಮೃತ ದೇಹವನ್ನು ಇಟ್ಟು ಮಹದೇಶ್ವರಬೆಟ್ಟ ಪೋಲೀಸ್ ಠಾಣೆಗೆ ಆಗಮಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ .ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮೃತ ದೇಹವನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ .ಈ ಸಂಬಂಧ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)