ಗದಗ: ಆರ್ಎಸ್ಎಸ್ ಗಣವೇಷಧಾರಿಯಾಗಿಯೇ ಕಾರ್ಯಕರ್ತರೊಬ್ಬರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಕಾರ್ಯಕರ್ತನ ತಲೆ ಮೇಲಿದ್ದ ಕಪ್ಪು ಟೋಪಿ ತೆಗೆದು, ಖಾದಿಯ ಗಾಂಧಿ ಟೋಪಿ ಹಾಕಿ ಪಕ್ಷಕ್ಕೆ ಬರಮಾಡಿಕೊಳ್ಳಲಾಗಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದ ನಿಂಗಬಸಪ್ಪ ಬಾಣದ್ ಕಾಂಗ್ರೆಸ್ ಸೇರಿದ ಕಾರ್ಯಕರ್ತ.
ನಿಂಗಬಸಪ್ಪ ಬಾಣದ್ ಅವರು ಮೂವತ್ತು ವರ್ಷದಿಂದ ಆರ್ಎಸ್ಎಸ್ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು. ಇದೀಗ ಸಚಿವ ಶಿವಾನಂದ್ ಪಾಟೀಲ್, ಮಾಜಿ ಸಚಿವ ಬಿಆರ್ ಯಾವಗಲ್, ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್,
ಮಾಜಿ ಶಾಸಕ ಎಸ್ಜಿ ನಂಜಯ್ಯನಮಠ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಸಮಾವೇಶದ ವೇದಿಕೆಗೆ ಗಣವೇಷಧಾರಿಯಾಗಿಯೇ ಆಗಮಿಸಿದ ನಿಂಗಬಸಪ್ಪ ಅವರಿಗೆ ಗಾಂಧಿ ಟೋಪಿ ಹಾಕಿ, ಪಕ್ಷದ ಬಾವುಟ ನೀಡಿ ಕಾಂಗ್ರೆಸ್ಗೆ ಬರಮಾಡಿಕೊಳ್ಳಲಾಯ್ತು.