ಬೀದರ್ (ಏ.09): ಕಾಂಗ್ರೆಸ್ ನವ್ರು ದೇಶದ ರೈತರ ಸಾಲಮನ್ನಾ ಮಾಡ್ತಿವಿ ಅಂತ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೇ ಅವ್ರಿಗೆ ದಮ್ಮಿದ್ರೆ ಮೊದ್ಲು ರಾಜ್ಯದ ರೈತರ ಸಾಲಮನ್ನಾ ಮಾಡ್ಲಿ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸವಾಲು ಹಾಕಿದರು.
ಬೀದರ್ ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಭಗವಂತ ಖೂಬಾರವರ ಪರವಾಗಿ ಬೀದರ್ ನಗರದ ಗುಂಪಾದಲ್ಲಿ ಸೋಮವಾರ ರಾತ್ರಿ ನಡೆದ ಭಾರತೀಯ ಜನತಾ ಪಾರ್ಟಿಯ ಸಿದ್ಧಾರೂಡ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅವರು ರೈತರ ಸಾಲಮನ್ನಾ ಮಾಡ್ಲಿ.
PUC ಮತ್ತು SSLC ಪಾಸಾದವರಿಗೆ ನವೋದಯ ವಿದ್ಯಾಲಯದಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅರ್ಜಿ ಸಲ್ಲಿಸಿ
ಉದ್ರಿ ಮಾತು ಬೇಡ ನಗದಿ ಕೆಲಸ ಮಾಡಲಿ ಎಂದರು.ಈ ಹಿಂದೆ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಕುಮಾರಸ್ವಾಮಿರವರು ರೈತರ ಸಾಲಮನ್ನಾ ಮಾಡಿದ್ದರು. ಅವರು ಉದ್ರಿ ಮಾತು ಯಾವತ್ತೂ ಕೂಡ ಹೇಳಿಲ್ಲ. ನಗದಿ ಕೆಲಸವನ್ನು ಮಾಡಿದ್ದಾರೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ನಮ್ಮ ಅವಧಿಯಲ್ಲಿ ಬೀದರ್ ಅಭಿವೃದ್ಧಿಗೆ ಶ್ರಮಿಸಿದ್ದೇವೆ:
2006ರಲ್ಲಿ ನಾನು ಸಚಿವನಾದ ಬಳಿಕ ಬೀದರ್ ನಗರದಲ್ಲಿ ದೊಡ್ಡ ದೊಡ್ಡ ರಸ್ತೆಗಳು ಆಗಿವೆ. ಬೀದರ್ ವಿಮಾನ ನಿಲ್ದಾಣಕ್ಕಾಗಿ ನಾನು 2006ರಲ್ಲಿ ದೆಹಲಿಗೆ ಮನವಿ ಸಲ್ಲಿಸಿದ್ದೆ. ಆ ಬಳಿಕ ವಿಮಾನ ನಿಲ್ದಾಣಕ್ಕೆ ಚಾಲನೆ ಸಿಕ್ಕಿತು. ಯಡಿಯೂರಪ್ಪರವರ ಮೊದಲನೇ ಕ್ಯಾಬಿನೆಟ್ ನಲ್ಲಿ ವಿಮಾನ ನಿಲ್ದಾಣಕ್ಕೆ ಅನುದಾನ ಕೊಟ್ಟಿದ್ದರು.
ಮೆಡಿಕಲ್ ಕಾಲೇಜ್ ಗೆ ಧರ್ಮಸಿಂಗ್ ರವರು ಫೌಂಡೇಷನ್ ಹಾಕಿದ್ರು. ನಾವು ಬಂದು ಅನುದಾನ ನೀಡಿ ಉದ್ಘಾಟನೆ ಮಾಡಿದ್ದೇವು. ತೋಟಗಾರಿಕೆ ಕಾಲೇಜು ಕೂಡ ಕೊಟ್ಟಿದ್ದೇವೆ. ಕಳೆದ ಸರ್ಕಾರದಲ್ಲಿ ಬಂದ್ ಆಗಿದ್ದ ಬಿಎಸ್ಎಸ್ಕೆ ಅನ್ನು 20 ಕೋಟಿ ರೂ. ಅನುದಾನ ಕೊಟ್ಟು ಚಾಲನೆ ಕೊಡಿಸಿದ್ದೆ. ಬಳಿಕ ಮತ್ತೆ ಅದು ಬಂದ್ ಆಗಿದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಬೇಸರ ವ್ಯಕ್ತಪಡಿಸಿದರು.
ದೇವೇಗೌಡರು ಅನುಮತಿ ಕೊಟ್ಟಿದ್ರೆ ಬಿಜೆಪಿ – ಜೆಡಿಎಸ್ ಮೈತ್ರಿ ಸರ್ಕಾರ ಮುಂದುವರೆಯುತ್ತಿತ್ತು:
2008ರಲ್ಲಿ ದೇವೇಗೌಡರು ಅನುಮತಿ ಕೊಟ್ಟಿದ್ದರೆ ಬಿಜೆಪಿ – ಜೆಡಿಎಸ್ ಮೈತ್ರಿ ಸರ್ಕಾರ ಮುಂದುವರೆ ಯುತ್ತಿತ್ತು. ಅದು ಆಗಲಿಲ್ಲ. 2018ರಲ್ಲಿ ಕೂಡ ದೇವೇಗೌಡರು ಅನುಮತಿ ಕೊಡಲಿಲ್ಲ. ಇದೀಗ ಮೈತ್ರಿಗೆ ದೇವೇಗೌಡರ ಅನುಮತಿ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ಅವರು ಅನುಮತಿ ಕೊಟ್ಟಿದ್ದಾರೆ. ದೇಶದ ಒಳಿತಿಗಾಗಿ ಮೋದಿಯವರ ಆಡಳಿತ ಅಗತ್ಯವಾಗಿದೆ ಎಂದು ದೇವೇಗೌಡರು ಕೂಡ ಹೇಳಿದ್ದಾರೆ. ಆಗಾಗಿ ನಾವು ಎನ್.ಡಿ.ಎ ಅಭ್ಯರ್ಥಿ ಭಗವಂತ ಖೂಬಾರವರನ್ನು ಗೆಲ್ಲಿಸಿಕೊಂಡು ಬರುವ ಕೆಲಸ ಮಾಡಬೇಕಾಗಿದೆ. ನಮ್ಮ ಮತ್ತು ಬಿಜೆಪಿ ನಡುವಿನ ಮೈತ್ರಿ ನ್ಯಾಚುರಲ್ ಆಗಿದೆ. ಬಿಜೆಪಿ ವಿಕ್ ಇದ್ದಲ್ಲಿ ಜೆಡಿಎಸ್, ಜೆಡಿಎಸ್ ವಿಕ್ ಇದ್ದಲ್ಲಿ ಬಿಜೆಪಿಯವ್ರು ಸಹಕಾರ ನೀಡಿ ರಾಜ್ಯದ 28 ಕ್ಕೆ 28 ಕ್ಷೇತ್ರಗಳಲ್ಲಿ ಗೆಲ್ಲುವ ಕೆಲಸ ಮಾಡಬೇಕಾಗಿದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ತಿಳಿಸಿದರು.