ಗದಗ:- ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಸಾರ್ವಜನಿಕರು ಪರದಾಟುವಂತಹ ಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ಟ್ಯಾಂಕರ್ ನೀರು ಹಿಡಿಯುವಾಗ ಮಹಿಳೆಯರ ಕಾದಾಟ ನಡೆದಿದ್ದು, ವೃದ್ಧೆಯ ಮೇಲೆ ಮುಗಿಬಿದ್ದು ಮಹಿಳೆಯರು ಹಲ್ಲೆ ಮಾಡಿದ್ದಾರೆ. ಒಂದೇ ಕುಟುಂಬದ ಮೂರು ಜನ ಮಹಿಳೆಯರು ಸೇರಿ ಏಕಾಂಗಿ ವೃದ್ಧೆಯ ಮೇಲೆ ಹಲ್ಲೆ ನಡೆದ ಘಟನೆ ಬೆಟಗೇರಿಯ ಕರ್ನಲ್ ಪೇಟೆಯಲ್ಲಿ ಜರುಗಿದೆ.
ಕುಮಾರಸ್ವಾಮಿ ಕೇಂದ್ರ ಸಚಿವನಾಗುವ ವಿಚಾರ- ರಾಗ ಎಳೆದು ಟೀಕಿಸಿದ ಡಿಕೆಶಿ!
ಬಳಿಕ ಮಹಿಳೆಯರನ್ನ ಸ್ಥಳೀಯರು ಸಮಾಧಾನ ಮಾಡಿದ್ದಾರೆ. ಗದಗ ಬೆಟಗೇರಿಯಲ್ಲಿ ಕಳೆದ 20 ದಿನಗಳಿಂದ ನೀರು ಬಂದಿಲ್ಲ. ಹೀಗಾಗಿ ಸಚಿವ ಹೆಚ್ ಕೆ ಪಾಟೀಲ್ ಕನಸಿನ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ. ತುಂಗಭದ್ರಾ ನದಿಯಿಂದ ಗದಗ ಬೆಟಗೇರಿ ನಗರಕ್ಕೆ ಸರಬರಾಜು ಮಾಡುವ ಯೋಜನೆ ಇದಾಗಿದ್ದು, ಕಳೆದ 20 ದಿನಗಳಿಂದ ನೀರು ಬರ್ತಿಲ್ಲ.. ಹೀಗಾಗಿ ಟ್ಯಾಂಕರ್ ಮೂಲಕ ನಗರಸಭೆ ನೀರು ಸರಬರಾಜು ಮಾಡುತ್ತಿದೆ.
ಟ್ಯಾಂಕರ್ ನೀರು ಬರುತ್ತಿದ್ದಂತೆ ಮುಗಿಬಿದ್ದು ಮಹಿಳೆಯರ ಗಲಾಟೆ ಶುರುವಾಗಿದೆ. ಮಹಿಳಾ ಮಣಿಗಳ ಗಲಾಟೆಗೆ ನಗರಸಭೆ ಅಧಿಕಾರಿಗಳು ಸುಸ್ತೋ ಸುಸ್ತಾಗಿದ್ದಾರೆ.