ಬೆಂಗಳೂರು: ಇವಿಎಂ ಯಂತ್ರದಿಂದ (EVM) ಮೋದಿ (Narendra modi) ಗೆಲ್ತಿರೋದು, ಮೊದಲು ಇವಿಎಂ ಮಿಷನ್ ವಿರುದ್ಧ ವಿರೋಧ ಪಕ್ಷಗಳು ಹೋರಾಟ ಮಾಡಬೇಕು ಎಂದು ಜೆಡಿಎಸ್ ಉಚ್ಚಾಟಿತ ನಾಯಕ ಸಿ.ಎಂ ಇಬ್ರಾಹಿಂ (C.M Ibrahim) ಇಂಡಿಯಾ ಕೂಟಕ್ಕೆ ಸಲಹೆ ನೀಡಿದ್ದಾರೆ.
ಬೃಹತ್ ಮೆರವಣಿಗೆ ಮೂಲಕ ನಾಮಿನೇಷನ್ ಸಲ್ಲಿಸಿದ ಡಿ.ಕೆ.ಸುರೇಶ್: ಯಾರೆಲ್ಲಾ ಸಾಥ್ ಕೊಟ್ರು ?
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಇಡಿ, ಐಟಿ, ಸಿಬಿಐ, ವೋಟಿಂಗ್ ಮಿಷನ್ ಈ 4 ಬಿಜೆಪಿಯವರಿಗೆ ದೊಡ್ಡ ಅಸ್ತ್ರವಾಗಿದೆ. ವಿಪಕ್ಷಗಳು ಬ್ಯಾಲೆಟ್ ಪೇಪರ್ ಬೇಕು ಎಂದು ಹೋರಾಟ ಮಾಡಬೇಕು. ಇಲ್ಲದೇ ಹೋದರೆ ಮನೆಯಲ್ಲಿ ಇವರೇ ಮಿಷನ್ ಒತ್ತುತ್ತ ಕೂತುಕೊಳ್ಳಬೇಕು. ಪ್ರಪಂಚದ ಯಾವುದೇ ದೇಶದಲ್ಲಿ ಇವಿಎಂ ಮಿಷನ್ ಇಲ್ಲ.
ಎಲ್ಲಾ ಕಡೆ ಬ್ಯಾಲೆಟ್ ಪೇಪರ್ ಇದೆ. ವಿಪಕ್ಷಗಳು ಸೀಟು ಕಿತ್ತಾಟ ಬಿಟ್ಟು ಇವಿಎಂ ಮಿಷನ್ ಬೇಡ ಎಂದು ಬೀದಿಗಿಳಿದು ಹೋರಾಟ ಮಾಡಬೇಕು. ಇವಿಎಂ ಮಿಷನ್ ಇದ್ದರೆ ಚುನಾವಣೆ ಎದುರಿಸದೇ ಬಾಯ್ಕಾಟ್ ಮಾಡಬೇಕು. ಆಗ ದೇಶದಾದ್ಯಂತ ಸುದ್ದಿ ಆಗುತ್ತದೆ. ಚುನಾವಣಾ ಆಯೋಗಕ್ಕೆ ಏಕೆ ಇವಿಎಂ ಮೇಲೆ ಅಷ್ಟು ಪ್ರೀತಿ? ಚುನಾವಣಾ ಆಯುಕ್ತರು ಯಾಕೆ ರಾಜೀನಾಮೆ ಕೊಟ್ಟರು ಎಂದು ಅವರು ಪ್ರಶ್ನಿಸಿದ್ದಾರೆ