ಬೆಂಗಳೂರು: ಕುಟುಂಬ ನಿರ್ವಹಣೆಯಲ್ಲಿ ಕುಟುಂಬದ ಯಜಮಾನಿಯ ಪಾತ್ರ ಪ್ರಮುಖವಾಗಿದೆ. ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ನಿರ್ವಹಣೆಯು ಉತ್ತಮ ಗುಣಮಟ್ಟದಲ್ಲಿರುತ್ತದೆ. ಈ ಆಶಯದೊಂದಿಗೆ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ಪಾವತಿಸುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮೀಗೆ ನೋಂದಣಿ ಮಾಡಿಸಿದ್ದ ಲಕ್ಷಾಂತರ ಮಹಿಳೆಯರಿಗೆ ಈಗಾಗಲೇ ಆರು ಕಂತಿನ ಹಣ ಮಹೀಳೆಯರ ಖಾತೆಗೆ ಬಂದಿದ್ದು,
ನಿಮಗೆ ಗೊತ್ತೇ..? ಶುಗರ್, ಕೊಲೆಸ್ಟ್ರಾಲ್, ತೂಕ ಕಂಟ್ರೋಲ್ʼನಲ್ಲಿರಲು ಹೆಸರು ಕಾಳು ಸೇವಿಸಬೇಕಂತೆ..!
ಏಳನೇ ಕಂತಿನ ಹಣಕ್ಕಾಗಿ ಮಹೀಳೆಯರು ಕಾದು ಕುಳಿತಿದ್ದಾರೆ. ಈಗಾಗಲೇ ಏಳನೆ ಕಂತಿನ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲು ಮಹೀಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿದ್ದತೆಯನ್ನು ಮಾಡಿದ್ದು ಇಂದು ಈ ಹಣವನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗುತ್ತದೆ. ತದನಂತರದಲ್ಲಿ ಮಹೀಳೆಯರ ಖಾತೆಗೆ ನೇರವಾಗಿ ಡಿಬಿಡಿ ಮೂಲಕ ವರ್ಗಾವಣೆ ಮಾಡಲಾಗುತ್ತೆ. ಅದ್ರೆ ಎಲ್ಲರ ಖಾತೆಗೂ ಹಣ ಒಟ್ಟಿಗೆ ಜಮೆ ಯಾಗುವುದಿಲ್ಲ
ಹಣ ಜಮೆಯಾಗದವರ ಪಟ್ಟಿ:
ಈಗಾಗಲೇ ಗೃಹಲಕ್ಷ್ಮಿ ಹಣ (Gruha Lakshmi Money) ನೊಂದಣಿ ಮಾಡಿದ ಸುಮಾರು 40% ಹಣ ಜಮೆ ಯಾಗಿಲ್ಲ. ಇದಕ್ಕಾಗಿ ಸರಕಾರ ಹಲವು ಸೂಚನೆಯನ್ನು ಈಗಾಗಲೇ ನೀಡಿದ್ದು ಇದೀಗ ಯಾರೆಗೆಲ್ಲ ಹಣ ಜಮೆ ಯಾಗಿಲ್ಲ ಅಂತವರ ಪಟ್ಟಿ ಯನ್ನು ಕೂಡ ಸಿದ್ದತೆ ಮಾಡಿದೆ. ಇಂತಹ ದಾಖಲೆ, ಖಾತೆಗಳನ್ನು ಪರಿಶೀಲನೆ ಮಾಡಿ ಏನು ಸಮಸ್ಯೆ ಎಂಬುದನ್ನು ಅರಿತು ಖಾತೆಗೆ ಹಣ ಜಮೆ ಮಾಡಲಿದೆ. ಈ ತಿಂಗಳಿನಲ್ಲಯೇ ಹಣ ಬಾರದವರಿಗೆ ಒಟ್ಟಿಗೆ ಎಲ್ಲ ಕಂತಿನ ಹಣ ಹಾಕಲಿದೆ.
ಸಮಸ್ಯೆ ಬಗೆಹರಿಸಿಕೊಳ್ಳಿ:
ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಹಣ ಬಾರದೇ ಇದ್ದಲ್ಲಿ 8147500500 ಸಂಖ್ಯೆಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಸಂದೇಶ ಕಳುಹಿಸಿರಿ. ಈ ಸಂಖ್ಯೆಗೆ ಸಂದೇಶ ಕಳುಹಿಸಿದ ತಕ್ಷಣವೇ ನಿಮ್ಮ ಗೃಹಲಕ್ಷ್ಮಿ ಅರ್ಜಿಯ ಪರಿಸ್ಥಿತಿ ಏನಾಗಿದೆ ಸಂದೇಶ ಬರಲಿದೆ. ಇಲ್ಲದಿದ್ದಲ್ಲಿ ನಿಮ್ಮ ಹತ್ತಿರ ಸೇವಾ ಕೇಂದ್ರ ಗಳಲ್ಲಿ ವಿಚಾರಿಸಿ ನಿಮ್ಮ ದಾಖಲೆಗಳನ್ನು ಸರಿಪಡಿಸಿಕೊಳ್ಳಿ.
ಎಲ್ಲಾ ದಾಖಲೆಗಳಲ್ಲೂ ಮಾಹಿತಿ ಒಂದೇ ಇರಬೇಕು
ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿರುವ ಬ್ಯಾಂಕ್ ಖಾತೆಯಲ್ಲಿಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಅರ್ಜಿಯೊಂದಿಗೆ ಸಲ್ಲಿಸಿರುವ ಎಲ್ಲಾ ದಾಖಲೆಗಳಲ್ಲಿ ಮಾಹಿತಿ ಒಂದೇ ಇರಬೇಕು. ಒಂದು ವೇಳೆ ವ್ಯತ್ಯಾಸ ಉಂಟಾಗಿದ್ದರೆ ಕೂಡಲೇ ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.