ತುಮಕೂರು: ಮಾಜಿ ಸಚಿವ ಮಾಧುಸ್ವಾಮಿ ಕೂಡ ತುಮಕೂರಿನಿಂದ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ನಾನು ಕೂಡ ಪ್ರಬಲ ಟಿಕೆಟ್ ಆಕಾಂಕ್ಷಿ ಎನ್ನುವ ಮೂಲಕ ಹೈಕಮಾಂಡ್ಗೆ ನೇರವಾಗಿಯೇ ಸಂದೇಶ ರವಾನಿಸಿದ್ದಾರೆ. ಜೊತೆಗೆ ವಿ ಸೋಮಣ್ಣಗೆ ಟಾಂಗ್ ಕೊಟ್ಟ ಮಾಧುಸ್ವಾಮಿ, ಅವರು ಎಲ್ಲ ಕ್ಷೇತ್ರದಲ್ಲೂ ಆಕ್ಟೀವ್ ಆಗಿರುತ್ತಾರೆ, ಅವರ ಸ್ಪರ್ಧೆ ಬಗ್ಗೆ ಗೊತ್ತಿಲ್ಲ, ನಾನಂತು ತುಮಕೂರು ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿ ಎಂದು ಒತ್ತಿ ಒತ್ತಿ ಹೇಳಿದ್ದಾರೆ..ಇವರಿಬ್ಬರು ಸ್ಪರ್ಧೆಗೇನೋ ರೆಡಿಯಾಗಿದ್ದಾರೆ.
ಆದ್ರೆ . ಸೋಮಣ್ಣಗೆ ಹೊರಗಿನವರೆಂಬ ಕಾರ್ಡ್ ವಿಲನ್ ಆಗಿದ್ದರೆ, ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿಗೆ ಒಳಒಪ್ಪಂದದ ಚಿಂತೆ ಇದೆ. ಜೊತೆಗೆ ಬಣ ರಾಜಕಾರಣದ ದೊಡ್ಡಮಟ್ಟದ ಹೊಡೆತ ಕೂಡ ಬೀಳಲಿದೆ. ಅಭಿವೃದ್ಧಿ ಕಾರ್ಯಕ್ರಮಗಳ ಹೊರತಾಗಿಯೂ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ನೋವು ಜೆ.ಸಿ. ಮಾಧುಸ್ವಾಮಿಯವರಿಗಿದೆ. ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಕರೆತರುವ ಯೋಚನೆ ಕೂಡ ಜಿಲ್ಲಾ ಬಿಜೆಪಿ ನಾಯಕರಲ್ಲಿದೆ.
Lizard Falling Meaning: ಹಲ್ಲಿ ಮೈ ಮೇಲೆ ಬಿದ್ದರೆ ಶುಭವೋ? ಅಶುಭವೋ? ಇಲ್ಲಿದೆ ನೋಡಿ ಉತ್ತರ
ಎಚ್ಡಿಕೆ ಸ್ಪರ್ಧಿಸಿದರೆ ನೇರ ಹಣಾಹಣಿ ಕಟ್ಟಿಟ್ಟ ಬುತ್ತಿ. ಆದರೆ ಮುದ್ದಹನುಮೇಗೌಡರೆದುರು ಸ್ಪರ್ಧೆಗೆ ಸ್ವತಃ ಕುಮಾರಸ್ವಾಮಿ ನೂರುಬಾರಿ ಯೋಚಿಸಬಹುದು. ಕಳೆದ ವರ್ಷದ ಇದೇ ಜೆಡಿಎಸ್ನ ಮೈತ್ರಿ ಆಟಕ್ಕೆ ಮುದ್ದಹನುಮೇಗೌಡ ಟಿಕೆಟ್ ವಂಚಿತರಾಗಿದ್ದು ಹಾಗೂ ದೇವೇಗೌಡರೇ ಸೋಲನುಭವಿಸಿದ್ದನ್ನು ಎಚ್ಡಿಕೆ ಮರೆಯಲು ಸಾಧ್ಯವಿಲ್ಲ. ಜತೆಗೆ ಎಚ್.ಡಿ. ಕುಮಾರಸ್ವಾಮಿಯವರೂ ಹೊರಗಿನವರಾಗಿರುವುದರಿಂದ ಜಿಲ್ಲೆಯ ಜನ ಸ್ವೀಕರಿಸುತ್ತಾರಾ ಎನ್ನುವುದು ಪ್ರಶ್ನೆ.