ಬಿಗ್ ಬಾಸ್ ಕನ್ನಡ 10’ ಕಾರ್ಯಕ್ರಮದಲ್ಲಿ ಒಂಬತ್ತನೇ ವಾರ ರಾಕ್ಷಸರು ವರ್ಸಸ್ ಗಂಧರ್ವರು ಟಾಸ್ಕ್ ಚಾಲ್ತಿಯಲ್ಲಿತ್ತು. ಇದರಲ್ಲಿ ಗಂಧರ್ವನಾಗಿಯೂ, ರಾಕ್ಷಸನಾಗಿಯೂ ಕಾರ್ತಿಕ್ ಅವರ ಪರ್ಫಾಮೆನ್ಸ್ ಚೆನ್ನಾಗಿತ್ತು. ಆದರೆ ಚಪ್ಪಲಿ ವಿಷ್ಯವನ್ನಿಟ್ಟುಕೊಂಡು ವಿನಯ್ & ಗ್ಯಾಂಗ್ ಕಾರ್ತಿಕ್ನ ಟಾರ್ಗೆಟ್ ಮಾಡಿ ‘ಕಳಪೆ’ ಕೊಟ್ಟಿದ್ದಾರೆ. ಕಾರ್ತಿಕ್ ಮೇಲೆ ಚಪಾತಿ ಹಿಟ್ಟಿನಿಂದ ವಿನಯ್ ಪದೇ ಪದೇ ಜೋರಾಗಿ ಹೊಡೆದರು.
ಶೇವಿಂಗ್ ಫೋಮ್ ಮಿಕ್ಸ್ ಆಗಿದ್ದ ಚಪಾತಿ ಹಿಟ್ಟನ್ನ ಕಾರ್ತಿಕ್ ಬಾಯಿಗೆ ವಿನಯ್ ತುರುಕಿದರು. ಆನಂತರ ಸಿಟ್ಟಿನಿಂದ ಕಾರ್ತಿಕ್ ತಮ್ಮ ಚಪ್ಪಲಿಯನ್ನ ನೆಲಕ್ಕೆ ಬಿಸಾಕಿದರು. ಅಗ ಚಪ್ಪಲಿ ಬೌನ್ಸ್ ಆಗಿ ವಿನಯ್ಗೆ ತಾಕಿತು. ಅದಕ್ಕೆ, ‘’ಕಾರ್ತಿಕ್ ಚಪ್ಪಲಿಯಿಂದ ನನ್ನ ಹೊಡೆದ’’ ಎಂದು ವಿನಯ್ ದೊಡ್ಡ ರಂಪ ಮಾಡಿದರು. ಇದೇ ಕಾರಣವನ್ನ ಇಟ್ಟುಕೊಂಡು ಕಾರ್ತಿಕ್ಗೆ ಈಗ ಕಳಪೆ ಪಟ್ಟ ಕೊಡಲಾಗಿದೆ. ಕಳಪೆ ಪಟ್ಟ ಪಡೆದ ಕಾರ್ತಿಕ್ ಜೈಲಿಗೆ ತೆರಳಿದ್ದಾರೆ.
ವೀಕ್ಷಕರ ಅಭಿಪ್ರಾಯ
‘’ಕಾರ್ತಿಕ್ಗೆ ಕಳಪೆ ಕೊಟ್ಟಿರೋದು ತಪ್ಪು. ಗ್ರೂಪಿಸಂನಿಂದ ಕಳಪೆ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ಕಾರ್ತಿಕ್ ಪರ್ಫಾಮೆನ್ಸ್ ಚೆನ್ನಾಗಿತ್ತು. ಕಳಪೆಗೆ ಕಾರ್ತಿಕ್ ಅರ್ಹನೇ ಅಲ್ಲ. ಈ ವಾರ ಕಾರ್ತಿಕ್ಗೆ ಕಿಚ್ಚನ ಚಪ್ಪಾಳೆ ಸಿಗಲೇಬೇಕು. ನಿಜವಾದ ಕಳಪೆಗಳು ಜೈಲಿನಿಂದ ಹೊರಗಿದ್ದಾರೆ. ಕಳಪೆಗಳೆಲ್ಲಾ ಸೇರಿ ಉತ್ತಮವಾಗಿ ಆಡಿದ ಕಾರ್ತಿಕ್ಗೆ ಕಳಪೆ ಕೊಟ್ಟಿದ್ದಾರೆ’’ ಅಂತೆಲ್ಲಾ ವೀಕ್ಷಕರು ತಮ್ಮ ಅಭಿಪ್ರಾಯವನ್ನ ಹೊರಹಾಕುತ್ತಿದ್ದಾರೆ.