ಬೆಂಗಳೂರು: ಆ ಯುವಕ ಡಿಲವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ..ಈ ನಡುವೆ ಯುವತಿಯೊಬ್ಬಳ ಪರಿಚಯವಾಗಿ ಅದು ಸ್ನೇಹವಾಗಿತ್ತು..ದಿನ ಕಳೆದಂತೆ ಪ್ರೀತಿಯಾಗಿ ಇಬ್ಬರೂ ಪ್ರಣಯ ಪಕ್ಷಿಗಳಂತೆ ಓಡಾಡ್ತಿದ್ರು..ಹೀಗೆ ಎಂಟು ವರ್ಷಗಳೇ ಕಳೆದಿತ್ತು..ಆದ್ರೆ ಆ ಪ್ರೀತಿ ಮದುವೆ ಹಂತಕ್ಕೆ ಬರ್ತಿದ್ದಂತೆ,ಯುವತಿ ಒಲ್ಲೆ ಎಂದಿದ್ಲು..ಅದ್ಕೆ ಯುವಕ ಏನ್ಮಾಡ್ಬಿಟ್ಟ ಗೊತ್ತಾ . ಪ್ರೀತಿ ಕೊಂದ ಕೊಲೆಗಾತಿ…. ಈ ಸ್ಟೋರಿ ನೋಡಿ. ಈ ಪೋಟೋದಲ್ಲಿ ಕಾಣ್ತಿರೋ ಜೋಡಿಯನ್ನೊಮ್ಮೆ ನೋಡಿ..ಹೆಸ್ರು ರಾಕೇಶ್, ಪ್ರಿಯಾಂಕ ಅಂತ .ರಾಕೇಶ್ ಮೂಲತಃ ಅನೇಕಲ್ ತಾಲೂಕಿನ ಕಲ್ಲಬಾಳು ಗ್ರಾಮದವನು.
ವೃತ್ತಿಯಲ್ಲಿ ಡೆಲಿವರಿ ಬಾಯ್ ಆಗಿದ್ದ ..ಹೀಗಿರುವಾಗ ಕೆಂಗೇರಿಯ ಕೋಡಿಪಾಳ್ಯದ ಬಳಿ ದೊಡ್ಡಮ್ಮನ ಮನೆಗೆ ಬರುವಾಗ ಇದೇ ಪ್ರೀಯಾಂಕಳ ಪರಿಚಯವಾಗಿತ್ತು..ಸ್ನೇಹ ಪ್ರೀತಿ ಅಂತ ಇಬ್ಬರದ್ದೇ ಒಂದು ಪ್ರಪಂಚವಾಗಿಬಿಟ್ಟಿತ್ತು..ಎಂಟು ವರ್ಷಗಳಿಂದ ಇಬ್ಬರು ಪ್ರೀತಿಸಿದ್ದು, ರೀಲ್ಸ್ ,ಪಾರ್ಕ್ ಮಾಲ್ ಅಂತ ಓಡಾಡಿಕೊಂಡಿದ್ರು..ಯುವತಿಗಾಗಿಯೇ ರಾಕೇಶ್ ಸಾಕಷ್ಟು ಖರ್ಚು ಮಾಡಿದ್ನಂತೆ..ಈ ನಡುವೆ ಮಗನ ಲವ್ ವಿಚಾರ ಗೊತ್ತಾಗಿ ಮದುವೆಗೆ ಗ್ರೀನ್ ಸಿಗ್ನಲ್ ಕೂಡಾ ಸಿಕ್ಕಿತ್ತಂತೆ..ಆದ್ರೆ ಯುವತಿ ಇತ್ತೀಚೆಗೆ ರಾಕೇಶ್ ನನ್ನ ಅವೈಡ್ ಮಾಡ್ತಿದ್ಲಂತೆ…ಇದ್ರಿಂದ ಕೋಪಗೊಂಡು ಮದುವೆ ಮಾಡಿಕೋ ಅಂದಾಗ ಪ್ರಿಯಾಂಕ ಆಗಲ್ಲ ಅಂದಿದ್ಲಂತೆ…
ಹೀಗಿರುವಾಗ್ಲೇ ಕೋಡಿಪಾಳ್ಯದ ನಿವೃತ್ತ ಪೊಲೀಸ್ ಅಧಿಕಾರಿಯ ಬಾಡಿಗೆ ಮನೆಗೆ ಪ್ರಿಯಾಂಕ ಫ್ಯಾಮಿಲಿ ಶಿಪ್ಟ್ ಆಗಿತ್ತು..ಆಗ ಮತ್ತೊಮ್ಮೆ ಮನೆ ಬಳಿ ಹೋಗಿ ರಾಕೇಶ್ ಗಲಾಟೆ ಮಾಡಿದಾಗ ಯುವತಿ ಮತ್ತು ಕುಟುಂಬಸ್ಥರು ಬೈದು ಕಳಿಸಿದ್ರಂತೆ..ಈ ನಡುವೆ ಬೇಸತ್ತು ತನ್ನ ಅಪ್ಪ ಅಮ್ಮನನ್ನ ಕರೆದುಕೊಂಡು ಹೋದ ರಾಕೇಶ್ ನೇರವಾಗಿ ಮದುವೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾನೆ..ಅದು ಗಲಾಟೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಇತ್ಯರ್ಥಕ್ಕೆ ಒಪ್ಪಿದ್ದಾರೆ…ಹೀಗಿರುವಾಗ ಯುವತಿಗೆ ಬೇರೆ ಮದುವೆ ಮಾಡಲು ತಯಾರಿ ನಡೆದಿದ್ದ ಬಗ್ಗೆ ಮಾಹಿತಿ ತಿಳಿದುಕೊಂಡು ನೆನ್ನೆ ಮಧ್ಯಾಹ್ನ ಮತ್ತೆ ಮನೆ ಬಳಿ ಹೋಗಿ ರಾಕೇಶ್ ಗಲಾಟೆ ಮಾಡಿದ್ದಾನೆ..
ಪ್ರೇಯಸಿ ಮತ್ತು ಕುಟುಂಬಸ್ಥರ ನಡುವೆ ಒಂದು ಗಂಟೆ ಕಾಲ ವಾಗ್ವಾದ ಮಾಡಿ ಬೇರೆ ಹುಡುಗನಿಗೆ ಕೊಟ್ಟು ಮದುವೆ ಮಾಡದಂತೆ ಎಚ್ಚರಿಸಿದ್ದಾನೆ..ಆಗ ಯುವತಿ ರಾಕೇಶ್ ನನ್ನ ತಿರಸ್ಕರಿಸಿದ್ದು, ನೋಡ ನೋಡುತ್ತಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ..ಆ ಬಳಿಕ ಬೆಂಕಿಯ ನೋವಿಗೆ ರಸ್ತೆಯಲ್ಲೆಲ್ಲಾ ಕಿರುಚಾಡಿದ್ದು, ಸ್ಥಳೀಯರು ಬೆಂಕಿ ನಂದಿಸಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಪ್ಟ್ ಮಾಡಿದ್ದಾರೆ..ಆದ್ರೆ ಶೇಕರ್೭೦% ರಷ್ಟು ದೇಹ ಸುಟ್ಟಿದ್ದು,ನೆನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ..
ಇನ್ನು ರಾಕೇಶ್ ಆಸ್ಪತ್ರೆಗೆ ಶಿಪ್ಟ್ ಆಗ್ತಿದ್ದಂತೆ ಪ್ರೇಯಸಿ ಕುಟುಂಬಸ್ಥರು ಮನೆಬಿಟ್ಟು ಎಸ್ಕೇಪ್ ಆಗಿದ್ದಾರೆ..ಮತ್ತೊಂದ್ಕಡೆ ಮಗನ ಮೇಲೆ ಪೆಟ್ರೋಲ್ ಸುರಿದು ಯುವತಿ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಅಂತ ರಾಕೇಸ್ ತಂದೆ ಆರೋಪಿಸಿದ್ದಾರೆ..ಒಟ್ನಲ್ಕಿ ಇದ್ದ ಒಬ್ಬ ಮಗನನ್ನ ಕಳೆದುಕೊಂಡು ತಂದೆ ಹತಾಶೆಯಾಗಿದ್ದು,ಅಸಲಿ ಸತ್ಯ, ತನಿಖೆಯಿಂದಷ್ಟೆ ಗೊತ್ತಾಗಬೇಕಿದೆ..ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ…