ಬೆಂಗಳೂರು:- ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ‘ಬದುಕೊಂದು ಮುಗಿಯದ ಸವಾಲು’ ಎಂದಿದ್ದಾರೆ.
ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕವಾದ ನಂತರ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ‘ಬದುಕೊಂದು ಮುಗಿಯದ ಸವಾಲು’ ಎಂದಿದ್ದಾರೆ.
ನ ದೈನ್ಯಂ, ನ ಪಲಾಯನಂ. ಯೋಧ ಎಂದಿಗೂ ದೂರಲಾರ ಅಥವಾ ವಿಷಾದ ವ್ಯಕ್ತಪಡಿಸಲಾರ’ ಎಂದಿದ್ದಾರೆ.
‘ಯೋಧನ ಬದುಕಿನಲ್ಲಿ ಎದುರಾಗುವ ಯಾವುದೇ ಸವಾಲು ಒಳ್ಳೆಯದು ಅಥವಾ ಕೆಟ್ಟದ್ದು ಆಗಿರಲಾರದು. ಸವಾಲು ಎಂದರೆ ಅದು ಕೇವಲ ಸವಾಲು ಅಷ್ಟೇ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
https://x.com/BasanagoudaBJP/status/1725512450349396025?t=MHzEUJYmGDaRAc4t3OqAoQ&s=09
ಯತ್ನಾಳ್ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಮಂಡಾಳ್ ವಗ್ಗರಣಿ ಎಂಬುವವರು, ‘ಯತ್ನಾಳ ಸಾಹೇಬ್ರೆ, ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರಬೇಕು ಅಲ್ವಾ … ಬಿಜೆಪಿ ಹೈ ಕಮಾಂಡ್ ನಿಮ್ಮ ಮಾತೇ ಯಾಕೆ ಕೇಳಬೇಕು ಎಂದು ವಾದಿಸುವಲ್ಲಿ ನೀವು ವಿಫಲ ಅನ್ನಿಸುತ್ತಿದೆ. ಮೋದಿ , ಅಮಿತ್ ಶಾ, ನಡ್ಡ ಅವರ ತೀರ್ಮಾನಕ್ಕೂ ವಿರೋಧ ಮಾಡಿದರೆ ಹೇಗೆ..ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ’ ಎಂದು ಸಲಹೆ ನೀಡಿದ್ದಾರೆ.