ಬೆಳಗಾವಿ:- ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ನೀರಿಗಾಗಿ ಪರದಾಟ ಹೇಳ ತೀರದಂತಾಗಿದೆ. ಮತ್ತೊಂದೆಡೆ ಭೀಕರ ಬರದಲ್ಲಿ ಜನರ ದಾಹ ತನಿಸಬೇಕಿದ್ದ ಶುದ್ದ ನೀರಿನ ಘಟಕಗಳು ಬಂದ್ ಆಗಿವೆ.
ತಿಳಿದಿರಲಿ: ಬೇಸಿಗೆಯಲ್ಲಿ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು…!
ಬೆಳಗಾವಿಯ ವಿವಿಧ ಭಾಗಗಳಲ್ಲಿ ತೆರೆಯಲಾಗಿದ್ದ 12 ಆರ್ಒ ಪ್ಲಾಂಟ್ಗಳು ತಾಂತ್ರಿಕ ಸಮಸ್ಯೆ, ನಿರ್ವಹಣೆ ಇಲ್ಲದೇ ಬಂದ್ ಆಗಿವೆ. ಕಳೆದ ಮೂರು ವರ್ಷಗಳಿಂದ ಶುದ್ಧ ಕುಡಿಯುವ ನೀರಿ ಘಟಕಗಳು ತುಕ್ಕು ಹಿಡಿದಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಲಕ್ಷಾಂತರ ರೂ ವೆಚ್ಚದಲ್ಲಿ ಪ್ರಾರಂಭಿಸಿದ್ದ ಘಟಕಗಳು ಬಂದ್ ಆಗಿವೆ. ನೀರಿನ ಸಮಸ್ಯೆಯನ್ನ ಬಗೆಹರಿಸದ ಪಾಲಿಕೆ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ.
ಕೆಲವೊಂದು ವಾರ್ಡ್ಗೆ ಪಾಲಿಕೆ ವಾರಕ್ಕೊಂದು ಬಾರಿ ನೀರು ಬಿಡ್ತಿದೆ. ಶುದ್ದ ನೀರಿನ ಘಟಕ ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ. ಸ್ಮಾರ್ಟ್ ಸಿಟಿ ಹಾಗೂ ಖಾಸಗಿ ಕಂಪನಿಯಿಂದ ನಿರ್ಮಾಣ ಆಗಿರೋ 14 ಆರ್ಒ ಪ್ಲಾಂಟ್ಗಳ ಪೈಕಿ ಎರಡೂ ಪ್ಲಾಂಟ್ ಅಷ್ಟೆ ವರ್ಕಿಂಗ್ನಲ್ಲಿವೆ. ಉಳಿದ 12 ಪ್ಲಾಂಟ್ಗಳು ಬಂದ್ ಆಗಿ ಮೂರು ವರ್ಷ ಕಳೆದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.
ಜವಾಟಗಲ್ಲಿ, ಬೋಗಾರೆಸ್, ಶ್ರೀನಗರ ಗಾರ್ಡನ್, ಅಂಬೇಡ್ಕರ್ ಗಾರ್ಡನ್, ವಡಗಾಂವ, ಟಿಳಕವಾಡಿ, ಶಹಾಪುರ, ಶಿವ ಬಸವನಗರ, ರಾಮತೀರ್ಥ ನಗರ, ಮಹಾಂತೇಶನಗರ, ಉದ್ಯಮಬಾಗ್, ಸದಾಶಿವನಗರದಲ್ಲಿ ಘಟಕಗಳು ಬಂದ್ ಆಗಿವೆ. ಡಿಸಿ ಕಚೇರಿ ಮತ್ತು ಸಿವಿಲ್ ಆಸ್ಪತ್ರೆಯಲ್ಲಿ ಮಾತ್ರ ಘಟಕಗಳು ವರ್ಕಿಂಗ್ನಲ್ಲಿವೆ
ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮಸ್ಥರು ಹನಿ ನೀರಿಗಾಗಿಯೂ ಪರದಾಡುತ್ತಿದ್ದಾರೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ಬಂದಿದೆ. ಪ್ರತಿ ವರ್ಷ ಬೇಸಿಗೆ ಬಂದ್ರೆ ಸಾಕು ಕುಡಿಯುವ ನೀರಿಗೆ ಗ್ರಾಮಸ್ಥರು ಪರಿತಪ್ಪಿಸಬೇಕು. ಯಾಕೆಂದರೆ ಜಲಮೂಲಗಳಾದ ಬಾವಿ, ಕೊಳವೆ ಬಾವಿಗಳು ಬತ್ತಿ ಹೋಗುತ್ತವೆ. ಹೀಗೆ ಇದೀಗ ಆರು ಬೋರ್ ವೆಲ್ ಗಳು ಬತ್ತಿ ಹೋಗಿದ್ದು ಗ್ರಾಮದಿಂದ ಎರಡು ಕಿಲೋಮೀಟರ್ ದೂರದವರೆಗೂ ನಡೆದುಕೊಂಡು ಹೋಗಿ ನೀರು ತೆಗೆದುಕೊಂಡು ಬರುವ ಸ್ಥಿತಿ ಇದೆ. ಬೆಳಗ್ಗೆಯಿಂದಲೇ ಸಂಜೆ ವರೆಗೂ ಕುಟುಂಬದ ಓರ್ವ ವ್ಯಕ್ತಿ ಬಿಂದಿಗೆ ಹಿಡಿದುಕೊಂಡು ಹೋಗಿ ಮನೆಗೆ ನೀರು ತರಬೇಕು. ಮಕ್ಕಳು, ಮಹಿಳೆಯರಿಗೆ ಎಲ್ಲಾ ಕೆಲಸವನ್ನ ಬಿಟ್ಟು ನೀರು ತುಂಬುವುದೇ ದೊಡ್ಡ ಕೆಲಸವಾಗಿದೆ