ಚಿತ್ರದುರ್ಗ: ಚಿತ್ರದುರ್ಗದ ಸೀಬಾರ ಸಮೀಪದಲ್ಲಿ ಹಿಂದೂ ಮಹಾಗಣಪತಿ ಶೋಭಾಯಾತ್ರೆ ದಿನ ಯುವಕನಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಸುದೀಪ್ (22) ಎಂಬಾತ ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದಾನೆ. ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸುದೀಪ್ ಹಾಗೂ ಸ್ನೇಹಿತರು ಬೈಕ್ನಲ್ಲಿ ಬರುತ್ತಿದ್ದಾಗ,
ಗಮನಿಸಿ.. ವಿದ್ಯುತ್ ಬಿಲ್ ಪಾವತಿಸದವರಿಗೆ ಅ.1ರಿಂದ ವಿದ್ಯುತ್ ಸಂಪರ್ಕ ಕಟ್!
ದರ್ಶನ್ & ಗ್ಯಾಂಗ್ ಬೈಕ್ ಅಡ್ಡಗಟ್ಟಿ ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ಬಿಳಿಚೋಡು ಮೂಲದ ಸುದೀಪ್, ದೇವರಾಜ್, ಅಜಯ್ಗೆ ಗಾಯವಾಗಿದೆ. ಚಾಕು ಇರಿದು ಕೊಲೆ ಬೆದರಿಕೆ ಹಾಕಿ ದರ್ಶನ್ & ಗ್ಯಾಂಗ್ ಎಸ್ಕೇಪ್ ಆಗಿದೆ.. ಸದ್ಯ BNS 126/2, 352, 115/2, 189/2, 191/2, 109,190 ಕಲಂ ಅಡಿಯಲ್ಲಿ ಕೇಸ್ ದಾಖಲಾಗಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ತನಿಖೆಯು ಮುಂದುವರಿದಿದೆ.