ಹುಬ್ಬಳ್ಳಿ: ಯುವ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶ ಹಂಜಗಿ ಅವರ ಹುಟ್ಟು ಹಬ್ಬವನ್ನ ಅತ್ಯಂತ ಸರಳವಾಗಿ ಆಚರಣೆ ಮಾಡಲಾಯಿತು. ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ- 73 ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರೂ ಆಗಿರುವ ಮಹೇಶ ಹಂಜಗಿ ಅವರು ಇನ್ನಷ್ಟು ಜನಪರ ಕಾರ್ಯ ಮಾಡಲಿ ಬಡವರ ಹಿಂದುಳಿದ ಹಾಗೂ ಸಮಾಜದ ತುಳಿತಕ್ಕೆ ಒಳಗಾದವರ ಏಳ್ಗೆಗೆ ಸದಾ ತನು ಮನ ಧನದಿಂದ ಶ್ರಮಿಸಲಿ ಎಂದು ಹಾರಿಸಲಾಯಿತು.
ಜನತಾ ಬಜಾರ್ ಬೀದಿ ಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷರಾದ ನಿರ್ಮಲಾ ಹಂಜಿಗಿ, ಇಂದಿರಾ ನಗರದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹೇಶ ಹಂಜಗಿ, ಮುಖಂಡರಾದ ಸೋಮಣ್ಣ ಹಂಜಿಗಿ, ತಿರುಪಲ ಪಟೇಲ್, ವೀರೇಶ ಇಂದರಗಿ, ಸುರೇಶ ವಜ್ರವಣ್ಣವರ, ಮಹಾಂತೇಶ ಬಸವರಾಜ ಗವಳೇಕಾರ, ಕೃಷ್ಣ ಭಟ್ ನೂರಾರು ಬೀದಿ ಬದಿ ವ್ಯಾಪಾರಸ್ಥರು ಭಾಗವಹಿಸಿದ್ದರು.