ಕಲಬುರಗಿ: ಯುವನಿಧಿ ನೊಂದಣಿ ಮಾಡುವಲ್ಲಿ ಕಲ್ಯಾಣ ಕರ್ನಾಟಕದಲ್ಲಿ ರಾಯಚೂರು ಫಸ್ಟ್ ಯಾದಗಿರಿ ಲಾಸ್ಟ್..ಹೌದು ಯುವನಿಧಿ ಯೋಜನೆಗೆ ಸಂಭಂಧಿಸಿದಂತೆ ಕಲಬುರಗಿಯ ಡಿಸಿ ಕಚೇರಿಯಲ್ಲಿಂದು ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯ ನೊಂದಣಿ ಡಾಟಾ ಮಾಹಿತಿ ನೀಡಿದ್ರು.
ಅದರಂತೆ ರಾಜ್ಯದಲ್ಲಿ 4742 ನೊಂದಣಿಯೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ರೆ ಕೊಡಗು ಕೇವಲ 204 ನೊಂದಣಿಯೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಅದೇ ರೀತಿಯಾಗಿ ಕಲ್ಯಾಣ ಕರ್ನಾಟಕದಲ್ಲಿ ರಿಜಿಸ್ಟರ್ ಆಗಿರೋ ಡಾಟಾ ನೋಡಿದ್ರೆ ರಾಯಚೂರು ಫಸ್ಟ್ ಅಂದ್ರೆ 2029 ಯಾದಗಿರಿ 605 ನೊಂದಣಿಯೊಂದಿಗೆ ಕೊನೆಯ ಸ್ಥಾನದಲ್ಲಿದೆ. ಅತಿದೊಡ್ಡ ಜಿಲ್ಲೆ ಕಲಬುರಗಿ 1575 ನಿರುದ್ಯೋಗಿ ಯುವಕರು ಮಾತ್ರ ರಿಜಿಸ್ಟರ್ ಮಾಡಿರೋದು ವಿಶೇಷವಾಗಿದೆ..