ನವದೆಹಲಿ: ಭಾರತದ ಯುವ ಸಮುದಾಯ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ರೀತಿಯ ಮನಸ್ಥಿತಿಯವರು ಎಂದು ರಿಸರ್ವ್ ಬ್ಯಾಂಕ್ ಇಂಡಿಯಾದ ಮಾಜಿ ಗವರ್ನರ್ ರಘುರಾಂ ರಾಜನ್ ಅಭಿಪ್ರಾಯ ಪಟ್ಟಿದ್ದಾರೆ. ಭಾರತೀಯ ಯುವ ಸಮುದಾಯ ತಮ್ಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹೊರ ದೇಶಗಳಿಗೆ ನಿರಂತರವಾಗಿ ಪ್ರಯಾಣಿಸುತ್ತಿದ್ದಾರೆ, ಇದು ಅವರ ಆತ್ಮವಿಶ್ವಾಸದ ಸಂಕೇತ ಎಂದು ರಾಜನ್ ಹೇಳಿದ್ದಾರೆ.
2016 ರಲ್ಲಿ ಎಂ.ಎಸ್.ಧೋನಿ ನಂತರ ನಾಯಕರಾಗಿ ಆಯ್ಕೆಯಾದ ವಿರಾಟ್ ಕೊಹ್ಲಿ ಮೈದಾನದಲ್ಲಿ ತನ್ನ ಆಕ್ರಮಣಕಾರಿ ನಡವಳಿಕೆಗಾಗಿ ಹೆಸರು ಪಡೆದಿದ್ದಾರೆ. ಮೇಕಿಂಗ್ ಇಂಡಿಯಾ ಅಡ್ವಾನ್ಸ್ಡ್ ಎಕಾನಮಿ ಸಮಾವೇಶದಲ್ಲಿ ಮಾತನಾಡುತ್ತಿದ್ದ 61 ವರ್ಷದ ರಘುರಾಂ ರಾಜನ್, ಭಾರತೀಯರು ನಿರಂತರವಾಗಿ ವಿದೇಶ ಪ್ರವಾಸ ಮಾಡುತ್ತಿರುವುದನ್ನು ನೋಡಲು ನಿಜವಾಗಿಯೇ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
” ದೇಶದ ಯುವ ಸಮುದಾಯ ವಿಶ್ವಾದ್ಯಂತ ತಮ್ಮ ವಹಿವಾಟುಗಳನ್ನು ಹೆಚ್ಚುಹೆಚ್ಚು ವಿಸ್ತರಿಸಲು ಬಯಸುತ್ತಿದ್ದಾರೆ. ನನ್ನ ಪ್ರಕಾರ, ಯುವಕರು ಕ್ರಿಕೆಟರ್ ವಿರಾಟ್ ಕೊಹ್ಲಿ ರೀತಿಯ ಮನಸ್ಥಿತಿಯನ್ನು ಹೊಂದಿದ್ದಾರೆ. ಜಗತ್ತಿನಲ್ಲಿ ನಾವು ಯಾರಿಗೂ ಎರಡನೆಯವರಲ್ಲ ಎನ್ನುವ ರೀತಿಯಲ್ಲಿ ಮುನ್ನುಗ್ಗುತ್ತಿದ್ದಾರೆ ” ಎಂದು ರಘುರಾಂ ರಾಜನ್ ಹೇಳಿದ್ದಾರೆ.
ನಿಮಗೆ ಈರುಳ್ಳಿ ಕತ್ತರಿಸಿ ಫ್ರಿಡ್ಜ್ʼನಲ್ಲಿ ಇಡೋ ಅಭ್ಯಾಸವಿದೆಯಾ?! ಇದೆಷ್ಟು ಡೇಂಜರ್ ಗೊತ್ತಾ ?
ಭಾರತದೊಳಗೆ ಉದ್ಯಮ ಸ್ಥಾಪಿಸುವುದನ್ನು ಬಿಟ್ಟು ವಿದೇಶಕ್ಕೆ ಹೋಗುತ್ತಿರುವುದಕ್ಕೆ ಅವರ ನಿರ್ದಿಷ್ಟ ಕಾರಣ ಏನು ಎನ್ನುವುದನ್ನು ಭಾರತ ಸರ್ಕಾರ ತಿಳಿದುಕೊಳ್ಳಬೇಕಿದೆ. ಕೆಲವು ಯುವ ಉದ್ಯಮಿಗಳ ಜೊತೆ ನಾನೂ ಮಾತನಾಡಿದ್ದೆ, ಅವರ ಮುಂದಿನ ಗುರಿಯಲ್ಲಿರುವ ಸ್ಪಷ್ಟತೆ, ನನಗೂ ಆಶ್ಚರ್ಯವನ್ನು ತಂದಿತು ಎಂದು ಮಾಜಿ ಆರ್ಬಿಐ ಗವರ್ನರ್ ಅಭಿಪ್ರಾಯ ಪಟ್ಟಿದ್ದಾರೆ.
ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಮಾತನಾಡುತ್ತಿದ್ದ ರಘುರಾಂ ರಾಜನ್, ನನ್ನ ದೇಶದ ಯುವಕರು ಉದ್ಯಮಗಳನ್ನು ಸ್ಥಾಪಿಸಲು ಸಿಂಗಾಪುರ ಅಥವಾ ಕ್ಯಾಲಿಫೋರ್ನಿಯಾ ಕಡೆ ಹೋಗುತ್ತಿದ್ದಾರೆ. ಅವರು ಯಾವ ಉದ್ದೇಶಕ್ಕಾಗಿ ಆ ನಗರಗಳನ್ನು ಆರಿಸಿಕೊಂಡಿದ್ದಾರೆ ಎನ್ನುವುದನ್ನು ನಾವು ಅರಿತುಕೊಳ್ಳಬೇಕಿದೆ ಎಂದು ರಘುರಾಂ ರಾಜನ್ ಹೇಳಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)