ಹಾವೇರಿ: ಕುಡಿಯುವ ನೀರಿನ ಬವಣೆ ಎದುರಿಸುತ್ತಿರುವ ಹಾನಗಲ್ ತಾಲೂಕಿನ ಬಾಳಂಬಿಡ ಗ್ರಾಮದ ಜನರಿಗೆ ಆಸರೆಯಾಗಿದ್ದಾರೆ. ಹೌದು ಕುಡಿಯುವ ನೀರಿನ ಹಾಹಾಕಾರ ನೀಗಿಸಲು ಸಂತೋಷ ಹಾಗೂ ಆದಪ್ಪ ದುಂಡಣ್ಣನವರ ಎಂಬ ಅಣ್ಣ – ತಮ್ಮರಿಂದ ಗ್ರಾಮಸ್ಥರಿಗೆ ಉಚಿತ ನೀರು ಸರಬರಾಜು ಮಾಡಿದ್ದಾರೆ. ಕಳೆದ ಒಂದು ವಾರದಿಂದ ಸ್ವಂತ ಟ್ರ್ಯಾಕ್ಟರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದು,
ಟ್ಯ್ರಾಕ್ಟರ್ ನಲ್ಲಿ ಎರಡು ಸಿಂಟ್ಯಾಕ್ಸ್ ಇಟ್ಟುಕೊಂಡು ಓಣಿ ಓಣಿಗೆ ನೀರು ನೀಡುತ್ತಿದ್ದಾರೆ. ಸ್ವಂತ ಜಮೀನಿನ ಬೋರ್ ವೆಲ್ ನಲ್ಲಿ ನೀರು ತುಂಬಿಕೊಂಡ ಜನರ ದಾಹ ತಣಿಸುತ್ತಿದ್ದಾರೆ. ನಿತ್ಯ ಸಾವಿರಾರು ಲೀಟರ್ ನೀರು ನೀರು ನೀಡುತ್ತಿದ್ದು, ಸರತಿ ಸಾಲಿನಲ್ಲಿ ನಿಂತು ನೀರು ತುಂಬಿಕೊಳ್ಳುತ್ತಿರುವ ಜನರು. ಇನ್ನೂ ಸಹೋದರರ ಕಾರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.