ಬಳ್ಳಾರಿ: ಶ್ರೀರಾಮುಲು 2 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ತಾರೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಕುರುಗೋಡು ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ದೇಶಿ ಮಾತನಾಡಿದ ಅವರು, ರಾಮುಲು ಗೆಲುವಿನ ಮೂಲಕ ಕೇಂದ್ರಕ್ಕೆ ಹೋಗಬೇಕು, ಜಗತ್ತಿನ ಅನೇಕ ದೇಶಗಳು ಪ್ರಧಾನಿ ಮೋದಿಯನ್ನು ಹಾಡಿ ಹೊಗಳುತ್ತಿವೆ. ಪಾಕಿಸ್ತಾನ ಕೂಡ ನರೇಂದ್ರ ಅಂತಾ ನಾಯಕರು ಬೇಕು ಅಂತಾ ಹೇಳುತ್ತಿದೆ ಎಂದು ಹೇಳಿದರು.ಇನ್ನೂ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ,
ಅಭಿವೃದ್ಧಿ ಯೋಜನೆಗಳು ಸ್ಥಗಿತವಾಗಿವೆ. ಭಾಗ್ಯ ಲಕ್ಷ್ಮೀ ಯೋಜನೆ ನಿಲ್ಲಿಸಿದ್ದಾರೆ ಕಾರಣ ಏನು ಸಿದ್ದರಾಮಯ್ಯನವರೇ ಎಂದು ಬಿಎಸ್ ವೈ ಪ್ರಶ್ನಿಸಿದ್ದು, ರಾಹುಲ್ ಗಾಂಧಿ ಭರವಸೆ ಕೊಟ್ಟಿದ್ರು, ಆದ್ರೆ ಈವರಗೆ ಒಂದು ರೂ ಸಹ ನೀಡಿಲ್ಲ, ಕಾಂಗ್ರೆಸ್ ಸುಳ್ಳು ಭರವಸೆ ನೀಡಿ ಜನ್ರನ್ನ ವಂಚಿಸ್ತಿದೆ. ಆದ್ದರಿಂದ ಈ ಕಾಂಗ್ರೆಸ್ ಸರ್ಕಾರವನ್ನ ಕಿತ್ತು ಒಗೆಯಬೇಕು, ಶ್ರೀರಾಮುಲು ರನ್ನ ಲಕ್ಷ ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು, ನರೇಂದ್ರ ಮೋದಿ ಪಕ್ಕದಲ್ಲಿ ರಾಮುಲು ಕೂರುವಂತೆ ನೀವೆ ಮಾಡಬೇಕು ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.