ಹಾವೇರಿ: ಬೊಮ್ಮಾಯಿ ಅವರು ಎಸ್ ಸಿ, ಎಸ್ ಟಿ ಸಮಾಜಗಳಿಗೆ ಮಾಡುವ ದೋಖಾಗಳಿಗೆ ನೊಂದು ಕಾಂಗ್ರೆಸ್ ಸೇರಿದಿನಿ ಎಂದು ಮಾಜಿ ಶಾಸಕ ನೆಹರೂ ಓಲೆಕಾರ್ ಹೇಳಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳ್ತಾರೆ. ಆದ್ರೆ ಬಿಜೆಪಿಯವರು ಸಮಸ್ಯೆಗಳನ್ನು ಬಗೆಹರಿಸುವ ಬದಲು ಧರ್ಮ ಯುದ್ದ, ದೇವರು, ಮಂದಿರ ಅಂತ ಹೇಳ್ತಾರೆ. ದೇವರನ್ನು ಬಡವರಲ್ಲಿ ಕಾಣು ಎಂದು ಮಹಾತ್ಮ ಗಾಂಧಿ ಹೇಳಿದ್ದಾರೆ. ನೀವು ಒಳ್ಳೆ ವ್ಯಕ್ತಿ , ನೀವು ಕಾಂಗ್ರೆಸ್ ನಲ್ಲಿರಬೇಕು ಎಂದು ಬಹಳ ಜನ ಹೇಳಿದ್ದಾರೆ. ಆದ್ದರಿಂದ ಕಾಂಗ್ರೆಸ್ ನ ಅನೇಕ ಗಣ್ಯರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದಿನಿ ಎಂದರು.
ಇನ್ನೂ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಗಡ್ಡದೇವರಮಠ ಒಳ್ಳೆ ವ್ಯಕ್ತಿ, ಅವರನ್ನು ಬೆಂಬಲಿಸಿದರೆ ಕ್ಷೇತ್ರಗಳಿಗೆ ಒಳ್ಳೆ ಕೆಲಸ ಮಾಡ್ತಾರೆ. ಹಾವೇರಿ ಜಿಲ್ಲೆಗೆ ಬೊಮ್ಮಾಯಿ ಕೊಡುಗೆ ಏನು? ಉಳಿದ ಸಿಎಂ ಗಳು ಅವರ ಜಿಲ್ಲೆಗಳಿಗೆ ಅಭಿವೃದ್ಧಿ ಕೆಲಸ ಮಾಡಿದರು. ಆದ್ರೆ ಹಾವೇರಿ ಜಿಲ್ಲೆಗೆ ಒಂದು ಒಳ್ಳೆ ರಸ್ತೆ ಇಲ್ಲ, ಕುಡಿಯೋ ನೀರಿನ ವ್ಯವಸ್ಥೆ ಇಲ್ಲ, ನಾನು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ, ನಾನು ಬಿಜೆಪಿಯಲ್ಲಿದ್ದಾಗಲೂ ನಾನು ಯಾವುದೇ ವ್ಯಕ್ತಿ ಜೊತೆ ಭಿನ್ನಾಭಿಪ್ರಾಯ ಇಟ್ಟಕೊಂಡಿಲ್ಲ, ನಾನು ಬೇರೆಯವರನ್ನು ಸೋಲಿಸಬೇಕು ಅಂತ ಬಂದಿಲ್ಲ, ಆನಂದ್ ಸ್ವಾಮಿ ಗೆಲ್ಲಿಸಬೇಕು ಅಂತ ಬಂದಿದಿನಿ ಎಂದು ಹೇಳಿದರು.