ಚಿಂತಾಮಣಿ: ಗಡಿಭಾಗಗಳಲ್ಲಿ ಬಿಜೆಪಿ ಪಕ್ಷ ಇತ್ರಿಚ್ಚೇಗೆ ಪ್ರಬಲವಾಗುತ್ತಿದ್ದು ಜನರ ದಿಕ್ಕು ತಪ್ಪಿಸಲು ಯತ್ನಾಳ್ ಹಾಗೂ ಪ್ರತಾಪ್ ಸಿಂಹಾ ಕೈಬಿಟ್ಟು ಪಕ್ಷದ ಹೇಳಿಕೆಗಾಗಿ ಶ್ರಮವಹಿಸಿದರೆ ಮುಂದಿನ ದಿನಗಳಲ್ಲಿ ನಿಮಗೆ ಉತ್ತಮ ಭವಿಷ್ಯ ಇದೆ ಎಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಹೇಳಿಕೆಯನ್ನು ಕೊಟ್ಟಿದ್ದಾರೆ.
ಚಿಂತಾಮಣಿ ತಾಲೂಕಿನ ಬೂರಮಾಕಲಹಳ್ಳಿ ಮಾರುತಿ ಮಂಟಪ ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖಂಡ ಜಿಲ್ಲೆಯಲ್ಲಿ ಸೋತಿರುವ ಅಭ್ಯರ್ಥಿಗಳು ರಾಜ್ಯದಲ್ಲಿ ಭ್ರಷ್ಟಾ ಸರ್ಕಾರ ವಿರುದ್ದ ಬಿ ವೈ ವಿಜಯೇಂದ್ರ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಹೋರಾಟ ನಡೆಸಿ ಮೂಡ ವಾಲ್ಮೀಕಿ ಹಗರಣದ ಬಗ್ಗೆ ಬಯಲಿಗೆ ತರಲಾಗಿದೆ. ಯಡಿಯೂರಪ್ಪ ನವರಂತೆ ವಿಜಯೇಂದ್ರ ಅವರು ಬಿಜೆಪಿ ಪಕ್ಷವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಇನ್ನೂ ಯತ್ನಾಳ್ ಹಾಗೂ ಪ್ರತಾಪ್ ಸಿಂಹಾ ಸ್ವಪಕ್ಷದ ವಿರುದ್ಧ ಹೇಳಿಕೆಗಳನ್ನು ಕೊಡುವುದನ್ನು ನಿಲ್ಲಿಸಬೇಕು. ಇಡೀ ರಾಜ್ಯದಲ್ಲಿ ಒಂದು ದಿನವು ಸುಮ್ಮನೆ ಕುಳಿತುಕೊಳ್ಳದೇ ಬಿವೈ ವಿಜಯೇಂದ್ರ ಹೋರಾಟ ನಡೆಸುತ್ತಿದ್ದಾರೆ. ಯತ್ನಾಳ್ ಅವರು ಯಾರನ್ನು ಗೊಂದಲಕ್ಕೆ ಒಳಪಡಿಸಬಾರದು. ಈಗಾಗಲೇ ಬಾಗೇಪಲ್ಲಿ ,ಗೌರಿಬಿದನೂರು ಚಿಂತಾಮಣಿ,ಶಿಡ್ಲಘಟ್ಟ ಸೇರಿದಂತೆ ಹಲವೆಡೆ ಬಿಜೆಪಿ ಪಕ್ಷ ಹೇಚಾಗಿರುತ್ತಿದೆ. ಆದರೆ ನೀವು ಇಲ್ಲ ಸಲ್ಲದ ಹೇಳಿಕೆಗಳನ್ನು ಕೊಟ್ಟು ಜನರ ದಿಕ್ಕು ತಪ್ಪಿಸಬೇಡಿ ಎಂದು ಮನವಿ ಮಾಡಿಕೊಂಡರು.
Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ದೀಪಾವಳಿಗೆ ಡಬಲ್ ಧಮಾಕಾ ಆಫರ್ ಘೋಷಣೆ
ಮುಖ್ಯಮಂತ್ರಿ ಹಾಗೂ ಡಿಕೆಶಿ ಪ್ಯಾಕೇಜ್ ಕೊಟ್ಟಿದರಿಂದ ನೀವು ಸ್ವಪಕ್ಷದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆರೋಪ ಮಾಡಿದರು. ಪ್ರತಾಪ್ ಸಿಂಹ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಇದೆ ಆದರೆ ನೀವು ಬಿಜೆಪಿ ಪಕ್ಷದ ವಿರುದ್ದ ಹೇಳಿಕೆ ಕೊಡುವುದು ಸರಿಯಿಲ್ಲಾ. ನಿಮ್ಮ ಬಗ್ಗೆ ನಮಗೆ ಗೊತ್ತಿದೆ ನಿಮ್ಮ ಬಗ್ಗೆ ಹೇಳಿದ್ರೆ ಸರಿಯಿಲ್ಲಾ ಎಂದು ಎಚ್ಚರಿಕೆ ನೀಡಿದರು.