ಹುಬ್ಬಳ್ಳಿ: ನಗರದ ಕೇಶ್ವಾಪುರದ ಬದಾಮಿನಗರದ ಮಹಿಳಾ ಮಂಡಳದಲ್ಲಿ ವಿಶ್ವ ಪರಿಸರ ದೀನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಂಡಳದ ಅಧ್ಯಕ್ಷೆ ಶ್ರೀಮತಿ ಭಾರತಿ ಗುಡಿ ಮಾತನಾಡಿ, ನಮ್ಮ ಪೃಥ್ವಿ ಜೀವಿಗಳನ್ನು ಹೊಂದಿರುವ ಏಕೈಕ ಗ್ರಹ ಇದು ನಮ್ಮ ವಾಸಸ್ಥಾನ ಭೂಮಿಯಲ್ಲಿನ ಜೀವಿಗಳ ಉಗಮ ವಿಕಾಸ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸುವುದು .
ಪಂಚಭೂತಗಳಿಂದ ನಿರ್ಮಿತವಾದ ನಮ್ಮ ಪರಿಸರ ಸಂಕ್ಷಿಪ್ತವಾಗಿ ಹೇಳುವುದಾದರೆ ನಮ್ಮ ಸುತ್ತಲಿನ ವಾತಾವರಣವೇ ಪರಿಸರ ಇದನ್ನು ಕಾಪಾಡಿಕೊಂಡು ಹೋಗಬೇಕು, ಪರಿಸರ ಕಾಳಜಿ ನಿರಂತರವಾಗಿರಬೇಕು ಎಂದರು. ಕಾರ್ಯದರ್ಶಿ ಪ್ರೇಮಾ ಬಾಗಲದ ಹಾಗೂ ಖಜಾಂಚಿ ಮಂಜುಳಾ ಗುರು. ತಾರಾಮತಿ ವಾಶಪ್ಪನವರ ಮಂಡಳದ ಸದಸ್ಯರು ಹಾಜರಿದ್ದರು.