ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ 54 ರ ವ್ಯಾಪ್ತಿಯಲ್ಲಿನ ಸಿದ್ಧಲಿಂಗೇಶ್ವರ ಕಾಲೋನಿ, ಚಹ್ಹಾನ್ ಗಾರ್ಡನ್ , ಹೆಗ್ಗೇರಿ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ಸ್ಥಳೀಯರು ಆಕ್ರೋಶಗೊಂಡಿದ್ದರು.
ನಕಲಿ ಸಿಗರೇಟ್ ಮತ್ತು ಹನ್ಸ್ ಉತ್ಪನ್ನಗಳ ದಾಸ್ತನು: CCB ಪೊಲೀಸರಿಂದ ನಾಲ್ವರು ಅರೆಸ್ಟ್!
ಧಾರವಾಡ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಅಭ್ಯರ್ಥಿ ರಾಜು ಅನಂತಸಾ ನಾಯಕವಾಡಿ ನೇತೃತ್ವದಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿದ್ದರು. ರಾಜು ಅನಂತಸಾ ನಾಯಕವಾಡಿ ಮತ್ತು ಸ್ಥಳೀಯರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಾರ್ಡ್ 54 ರ ಸದಸ್ಯೆ ಸರಸ್ವತಿ ದೋಂಗಡಿ, ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಶಾಸಕ ಮಹೇಶ ಟೆಂಗಿನಕಾಯಿ
ನಿರ್ಲಕ್ಷ್ಯ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜಾಬ್ದಾರಿತನದಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ರಸ್ತೆ ದುರಸ್ತಿಗೆ ಒತ್ತಾಯ ಮಾಡಿದ್ದರು.
ರಸ್ತೆ ದುರಸ್ತಿಗೆ ಆಗ್ರಹಿಸಿ 24 ಗಂಟೆಯೊಳಗೆ ಕೆಲಸ ಆರಂಭ ಮಾಡಿದ್ದು ವಿಶೇಷ. ಆದರೆ ಕಾಟಾಚಾರಕ್ಕೆ ಒಂದು ಜೆಸಿಬಿ ಯಂತ್ರದ ಮೂಲಕ ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೆ ಮುಂದಾಗಿದ್ದಾರೆ. ಆದರೆ ಪೂರ್ಣ ಪ್ರಮಾಣದಲ್ಲಿ ಗುಣಮಟ್ಟದ
ಕಾಮಗಾರಿಗೆ ರಾಜು ಅನಂತ ಸಾ ನಾಯಕವಾಡಿ ಆಗ್ರಹಿಸಿದ್ದಾರೆ.
ಇದೇ ರೀತಿ ಸಾಕಷ್ಟು ಕಡೆಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ರಸ್ತೆ, ವಿದ್ಯುತ್ ದೀಪ , ಒಳಚರಂಡಿ ಕಾಮಗಾರಿ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ಜನರು ವಂಚಿತರಾಗಿದ್ದಾರೆ. ಆದ್ದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಮಗಾರಿ ಮಾಡದಿದ್ದರೆ ದುರಸ್ತಿಗೆ ಆಗ್ರಹಿಸಿ ಉಗ್ರ ಸ್ವರೂಪದ ಹೋರಾಟ ನಡೆಸುವುದಾಗಿ ರಾಜು ಅನಂತ ಸಾ ನಾಯಕವಾಡಿ ಎಚ್ಚರಿಕೆ ನೀಡಿದ್ದಾರೆ