ಕಲಬುರಗಿ: ತೋಳ ದಾಳಿ ಮಾಡಿದ ಹಿನ್ನಲೆ ಹೊಲದಲ್ಲಿದ್ದ 8 ಜನರು ಗಾಯಗೊಂಡು ಆಸ್ಪತ್ರೆ ಪಾಲಾದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಅಳಂದ ತಾಲೂಕಿನ ಚಲಗೇರಾ ಗ್ರಾಮದಲ್ಲಿ ಘಟನೆ ನಡೆದಿದ್ದು ಹೊಲದಲ್ಲಿನ ಕೊಟ್ಟಿಗೆಯಲ್ಲಿ ಕಸಗೂಡಿಸುತಿದ್ದ ರೈತರ ಮೇಲೆ ತೋಳ ಯದ್ವಾತದ್ವಾ ಅಟ್ಯಾಕ್ ಮಾಡಿದೆ..
ಮೊದಲು ರೈತ ಶರಣಪ್ಪ ನಂತ್ರ ನೀಲಕಂಠ ಹೀಗೆ ಇಬ್ಬರೂ ದಾಳಿಗೆ ಒಳಗಾಗಿದ್ದಾರೆ..ನಂತ್ರ ಸರಣಿ ದಾಳಿಯಾಗಿ 8 ಜನ ಹೈರಾಣಾಗಿದ್ದಾರೆ..ಓರ್ವ ಸೊಲ್ಲಾಪುರ ಉಳಿದವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ..