ತುಮಕೂರು: ಕುಡಿಯಲು ನೀರಿಲ್ಲದೇ ಗ್ರಾಮಸ್ಥರ ಪರದಾಡುವ ಸ್ಥಿತಿ ನಿರ್ಮಾಣವಾದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಮಲನಾಯಕನ ತಾಂಡ್ಯದಲ್ಲಿ ನಡೆದಿದೆ. ಗ್ರಾಪಂ ಸಮರ್ಪಕವಾಗಿ ನೀರು ಬಿಡ್ತಿಲ್ಲ, ದಿನಗಟ್ಟಲೇ ಟ್ಯಾಂಕ್ ಬಳಿ ಕಾದರೂ ನೀರಿಲ್ಲ, ಬೆಳಿಗ್ಗೆ ಯಿಂದ ರಾತ್ರಿವರೆಗೂ ಬಿಂದಿಗೆ ಇಟ್ಟು ಕಾಯುತ್ತಿದ್ದೇವೆ ಎಂದು ಆರೋಪಿಸಿದ್ದಾರೆ.
ಗ್ರಾಪಂ ಪಿಡಿಓ ನೀರಿನ ಬಗ್ಗೆ ಸಮಸ್ಯೆ ಕೇಳಲು ಹೋದರೇ ಉಡಾಫೆ ಉತ್ತರ ನೀಡುತ್ತಾರೆ. ಗ್ರಾಮದ ನಿವಾಸಿಗಳಿಗೆ ಹಾಗೂ ದನ ಕರುಗಳಿಗೆ ನೀರಿಲ್ಲದೇ ಪರದಾಟ ನಡೆಸುತ್ತಿದ್ದಾರೆ. ಗ್ರಾಪಂ ಜೊತೆಗೆ ಗ್ರಾಮದಲ್ಲಿ ಚರಂಡಿ ಸ್ವಚ್ಚತೆ ಮಾಡದೆ ಸುಮ್ಮನಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.