ಬೆಂಗಳೂರು:- ಜೈಲು ಸೇರಿದ ಎರಡೇ ದಿನಕ್ಕೆ ಡಿ ಗ್ಯಾಂಗ್ ಗೆ ಭರ್ಜರಿ ಮಟನ್ ಊಟ ಸಿಕ್ಕಿದೆ.
ಭಾರತೀಯ ಕಾರ್ಮಿಕರಿಗೆ ಶೋಷಣೆ ಆರೋಪ..ಹಿಂದೂಜಾ ಕುಟುಂಬದವರಿಗೆ 4 ವರ್ಷ ಜೈಲು ಶಿಕ್ಷೆ!
ಕೊಲೆ ಕೇಸ್ನಲ್ಲಿ ಪವಿತ್ರಾ ಗೌಡ ಎ1 ಆಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅವರು ಜೈಲು ಸೇರಿ ನಿನ್ನೆಗೆ ಎರಡು ದಿನ ಕಳೆದಿದೆ. ಎರಡನೇ ದಿನವಾದ ನಿನ್ನೆ ಪವಿತ್ರಾ ಗೌಡ ಅವರ ಪರಪ್ಪನ ಅಗ್ರಹಾರ ಜೈಲಿಯಲ್ಲಿ ಮಟನ್ ಊಟ ಸೇವಿಸಿದ್ದಾರೆ.
ಸಂಜೆ 8 ಗಂಟೆಯ ಸುಮಾರಿಗೆ ಕಾರಾಗೃಹ ಸಿಬ್ಬಂದಿಯು ಊಟ ನೀಡಿದರು. ಊಟ ಮಾಡಿದ ಬಳಿಕ ಮಹಿಳಾ ವಿಭಾಗದ ಡಿ ಬ್ಯಾರಕ್ನಲ್ಲಿ ಪವಿತ್ರಾ ಗೌಡ ಮೌನಕ್ಕೆ ಜಾರಿದರು. ತಮಗೆ ಎಂಥ ಪರಿಸ್ಥಿತಿ ಎದುರಾಯ್ತು ಎಂದು ಅವರು ಕಣ್ಣೀರು ಹಾಕಿದ್ದಾರೆ ಎನ್ನಲಾಗಿದೆ. ನಿನ್ನೆ ಪವಿತ್ರಾ ಗೌಡ
ಪೋಷಕರ ಜೈಲಿಗೆ ಭೇಟಿ ನೀಡಿದ್ದರು. ಆಗಲೂ ಕೂಡ ಪವಿತ್ರಾ ಅತ್ತರು. ಸರಿಯಾಗಿ ಊಟ, ನಿದ್ರೆ ಮಾಡದೇ ಅವರು ಚಡಪಡಿಸುತ್ತಿದ್ದಾರೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನು ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳಿಸಿದ್ದ ಎನ್ನಲಾಗಿದೆ.