ಚಾಮರಾಜನಗರ:- ಗೃಹಲಕ್ಷ್ಮಿ ಹಣದಿಂದ ಹಳ್ಳಿ ಹಳ್ಳಿಯಲ್ಲೂ ಹೆಂಗಸರು ನಲಿತಾವ್ರೆ ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ 2000 ರೂಪಾಯಿಗೆ ಹೆಂಗಸರು ಹಳ್ಳಿಹಳ್ಳೀಲಿ ನಲಿತಾವ್ರೆ. ಅದೇ ಯಡಿಯೂರಪ್ಪ 1 ಲಕ್ಷದ ಭಾಗ್ಯಲಕ್ಚ್ಮೀ ಬಾಂಡ್ ನೀಡಿದ್ದಾರೆ ಅರ್ಥ ಮಾಡಿಕೊಳ್ಳಲಿ. 2 ಸಾವಿರ ದೊಡ್ಡದೋ 1 ಲಕ್ಷ. ದೊಡ್ಡದೋ ಜನರೇ ತಿಳ್ಕೋಬೇಕು.
ಗುಂಡ್ಲುಪೇಟೆಯಲ್ಲಿ ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಹೇಳಿಕೆ.ಹೆಣ್ಣು ಹುಟ್ಟಿದ್ರೆ ಅನಿಷ್ಟ ಅನ್ನೋವ ಕಾಲದಲ್ಲಿ 2004 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಹೆಣ್ಣು ಮಕ್ಕಳು ಹುಟ್ಟಿದ್ರೆ 1 ಲಕ್ಷ ಬಾಂಡ್ ನೀಡೋದಾಗಿ ಘೋಷಿಸಿದ್ರು. ಅದರಂತೆ 40 ಲಕ್ಷ ಜನರಿಗೆ 1 ಲಕ್ಷ ಬಾಂಡ್ ವಿತರಿಸಲಾಗಿದೆ. ಹುಟ್ಟಿದ ಹೆಣ್ಣು ಮಕ್ಕಳು 18 ವರ್ಷ ತುಂಬಿದ ಕೂಡಲೇ 1 ಲಕ್ಷ ಪಡೆಯುತ್ತಾಳೆ .
ಪ್ರೇಮರಿ ಓದಿದ ಹೆಣ್ಣು ಮಕ್ಕಳು ಹೈಸ್ಕೂಲ್ ಗೆ ಓದೋಕೆ ಹೋಗಲು ಸೈಕಲ್ ನೀಡಿದ ಕೀರ್ತಿ ಮಾಜಿ ಸಿ.ಎಂ. ಬಿ.ಎಸ್.ಯಡಿಯೂರಪ್ಪಗೆ ಸಲ್ಲುತ್ತದೆ. ರಾಜ್ಯದ ಗ್ಯಾರಂಟಿ ಯೋಜನೆಗಳಿಗಿಂತ ಬಿಜೆಪಿ ಪಕ್ಚದ ಭರವಸೆ ಹಾಗೂ ಜನಪರ ಸಾಧನೆ ದೊಡ್ಡದು ಎಂದು ಮಾಜಿ ಸಚಿವ ಎನ್.ಮಹೇಶ್ ಹೇಳಿಕೆ ನೀಡಿದ್ದಾರೆ.