ಚಿತ್ರದುರ್ಗ: ಪತಿಯ ಮನೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲವೆಂದು ಪತ್ನಿ ಮನೆ ಮೆಟ್ಟಿಲ ಮೇಲೆ ಕುಳಿತು ಆಹೋರಾತ್ರಿ ಧರಣಿ ನಡೆಸಿದ ಘಟನೆ ಚಿತ್ರದುರ್ಗದ ಆದರ್ಶ ನಗರದಲ್ಲಿ ನಡೆದಿದೆ. ಕಳೆದ ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ತೇಜಸ್ವಿನಿ ವಿಕಾಸ್ ದಂಪತಿ. ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನ ತೇಜಸ್ವಿನಿ ಹಾಗೂ ಚಿತ್ರದುರ್ಗದ ಆದರ್ಶ ನಗರದ ವಿಕಾಸ್ ಗೆ ಗುರು ಹಿರಿಯರ ನಿಶ್ಚಯದಂತೆ
ವಿವಾಹವಾಗಿತ್ತು. ಮದುವೆಯ ಸಮಯದಲ್ಲಿ ವರದಕ್ಷಿಣೆ ಕೊಟ್ಟಿದ್ದು, ಮತ್ತೆ ತರುವಂತೆ ಅತ್ತೆ ಮಾವ ಹಾಗೂ ಪತಿ ವಿಕಾಸ್ ವಿರುದ್ದ ಆರೋಪ ಮಾಡಿದ್ದಾರೆ. ಇದರ ನಡುವೆ ನಾನು ಗರ್ಭಿಣಿಯಿರುವಾಗ ಹೊಟ್ಟೆಯಲ್ಲಿರುವ ಮಗು ಗಂಡೋ ಹೆಣ್ಣೊ ಎಂದು ಪರೀಕ್ಷಿಸಲು ಸಾಗರದ ಬಳಿಯ ಜ್ಯೋತಿಷಿಯೊಬ್ಬರ ಬಳಿಕರೆದೊಯ್ಯದಿದ್ದರು.
ನನ್ನ ಕೈಗಳನ್ನು ಹಿಂದೆ ಕಟ್ಟಿಸಿ ಮಕ್ಕಳಾಗದ ಹಾಗೆ ಪತಿಯ ಮನೆಯವರು ಮಾತ್ರೆ ಕೊಡಿಸಿದ್ದರು. ಇಷ್ಟೆಲ್ಲಾ ಅನ್ಯಾಯ ಮಾಡಿರುವ ಪತಿ ಅತ್ತೆ ಹಾಗು ಮಾವ ಈಗ ಮನೆಯಿಂದ ನನ್ನನ್ನು ಹೊರ ಹಾಕಿದ್ದಾರೆ. ಮನೆಗೆ ಬೀಗ ಹಾಕುತ್ತಾರೆ. ಮನೆಗೆ ಹೋಗಲು ಬಿಡುತ್ತಿಲ್ಲ ಎಂದು ತೇಜಸ್ವಿನಿ ಅಳಲನ್ನು ತೋಡಿಕೊಳ್ಳುತ್ತಾರೆ.