ಬೆಂಗಳೂರು: ನಾನು ಕಾಂಗ್ರೆಸ್ ಚಿಹ್ನೆಯ ಮುಖಾಂತರ ಆಯ್ಕೆಯಾಗಿ ಬಂದಿದ್ದೇನೆ ನನ್ನನ್ನು ಯಾಕೆ ಬಿಜೆಪಿಯವರು ಸಂಪರ್ಕಿಸ್ತಾರೆ ಎಂದು ಬಿಜೆಪಿ ಪಕ್ಷದ ವಿರುದ್ದ ಶಾಸಕ ಲಕ್ಷ್ಮಣ ಸವದಿ ಕಿಡಿ ಕಾರಿದರು.
Bigg News: ರಾಜ್ಯಸಭಾ ಚುನಾವಣೆ: ಪರೋಕ್ಷವಾಗಿ ಸೋಲು ಒಪ್ಪಿಕೊಂಡ್ರಾ ಹೆಚ್ ಡಿಕೆ…?
ವಿಧಾಸೌಧದಲ್ಲಿ ಇಂದು ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆ ಸಂಬಂಧ ಮತಚಲಾಯಿಸಲು ಬಂದ ವೇಳೆ ಮಾದ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಂಬಂಧ ತಮ್ಮ ಪರ ಮತಚಲಾಯಿಸಲು ನನ್ನನ್ನು ಇದುವರೆಗೂ ಯಾರೊಬ್ಬರು ಸಂಪರ್ಕ ಮಾಡಿಲ್ಲ, ನಾನು ಕಾಂಗ್ರೆಸ್ ಚಿಹ್ನೆಯ ಮುಖಾಂತರ ಆಯ್ಕೆಯಾಗಿ ಬಂದಿದ್ದೇನೆ ನನ್ನನ್ನು ಯಾಕೆ ಸಂಪರ್ಕಿಸ್ತಾರೆ ಎಂದರು.
ಇವರೇನು ಸತ್ಯ ಹರಿಶ್ಚಂದ್ರ ರಾಜನ ವಂಶಸ್ಥರ ? ಇವರಿಗ್ಯಾಕೆ ನಾವು ಆತ್ಮಸಾಕ್ಷಿಯಿಂದ ಮತಹಾಕಬೇಕು. ಜೆಡಿಎಸ್ ನವರು ತಮ್ಮ ಮತಗಳನ್ನು ತಮ್ಮಲ್ಲಿ ಇರಿಸಿಕೊಳ್ಳುವ ಸಲುವಾಗಿ ತಮ್ಮ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯವರನ್ನು ನಿಲ್ಲಿಸಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವುದಿಲ್ಲ ಎಂದು ಅವರು ಹೇಳಿದರು.