ಹಾವೇರಿ: ನಾಳೆ ಸಾಯಂಕಾಲದೊಳಗೆ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ಸಚಿವ ಹೆಚ್ ಕೆ ಪಾಟೀಲ್ ಹೇಳಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಗೆ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ. ಕಾಂಗ್ರೆಸ್ ತನ್ನ ತತ್ವ ಸಿದ್ದಾಂತಗಳನ್ನ ಬಿಡುವುದಿಲ್ಲ,
ನಾಳೆ ಸಾಯಂಕಾಲದೊಳಗೆ ಅಭ್ಯರ್ಥಿ ಘೋಷಣೆ ಆಗಲಿದೆ ಎಂದು ಹೇಳಿದರು. ಇನ್ನೂ ಶಿಗ್ಗಾವಿಯಲ್ಲಿ ಟಿಕೆಟ್ ಬದಲಾವಣೆ ಆಗುತ್ತದೆ ಎಂದು ಹೇಳಲಾಗುವುದಿಲ್ಲ, ಅದಲ್ಲದೆ ಕಾಂಗ್ರೆಸ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುವುದಿಲ್ಲ, ರಾಜಕಾರಣದಲ್ಲಿ ಸಾಪ್ಟ್, ಹಾರ್ಡ್ ರಾಜಕಾರಣ ಕಾಂಗ್ರೆಸ್ ನಲ್ಲಿಲ್ಲ ಎಂದರು. ಮೂಡಾ ಪ್ರಕರಣದಲ್ಲಾದ ರಾಜಕಾರಣ ಬಗ್ಗೆ ಜನರು ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ.
ಪ್ರತಿರಾತ್ರಿ ಮೊಸರು ತಿನ್ನುತ್ತಿದ್ರೆ, ಇಂದಿನಿಂದ ಆ ಅಭ್ಯಾಸ ಬಿಟ್ಬಿಡಿ: ಆಯುರ್ವೇದ ತಜ್ಞರ ಸಲಹೆ ಹೀಗಿದೆ
ಯಾಕಂದ್ರೆ ಮುಡಾ ಪ್ರಕರಣದಲ್ಲಿ ಯಾವುದಾದರೂ ಹಣಕಾಸು ಬದಲಾವಣೆ ಆಗಿದಿಯಾ.? ಯಾರಾದ್ರು ಆಸ್ತಿ ತಗೊಂಡು ಓಡಿ ಹೋಗಿದ್ದಾರಾ.? ಎಂದು ಪ್ರಶ್ನಿಸಿದ್ದಾರೆ. ರಾಜಕೀಯ ದುರುದ್ದೇಶ, ಕುತುಂತ್ರ ಪ್ರಜಾಪ್ರಭುತ್ವಕ್ಕೆ ಸೂಕ್ತವಲ್ಲ, ಇ ಡಿಯನ್ನ ರಾಜಕೀಯ ದುರದ್ದೇಶಕ್ಕೆ ಕೇಂದ್ರ ಬಳಸಿಕೊಳ್ಳುತ್ತಿದೆ. ಇ ಡಿ ಇಟ್ಟಿರುವ ಈ ಹೆಜ್ಜೆ ಆ ಸಂಸ್ಥೆಯ ಘನತೆ ಕಡಿಮೆ ಮಾಡುತ್ತದೆ. ಲೋಕಾಯುಕ್ತ ತನಿಖೆ ನಡೆಯುತ್ರಿದೆ, ಈ ಸಂದರ್ಭದಲ್ಲಿ ಇ ಡಿ ರೇಡ್ ಮಾಡಿದೆ ಏನಿದರರ್ಥ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದರು.