ಬೆಂಗಳೂರು: ನಾನು ಸ್ವಾಮೀಜಿಯನ್ನು ರಾಜಕೀಯಕ್ಕೆ ಎಳೆದು ತರುತ್ತಿಲ್ಲ, ಆದರೆ ಬೆನ್ನಿಗೆ ಚೂರಿ ಹಾಕಿದವರನ್ನು ಕರೆದುಕೊಂಡು ಹೋದರೆ ಹೇಗೆ? ಇದನ್ನು ಪ್ರಶ್ನಿಸಿದ್ದೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಮಾತನಾಡಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒಕ್ಕಲಿಗ ಸ್ವಾಮೀಜಿಗಳನ್ನು ಭೇಟಿ ಮಾಡಿರುವ ವಿಚಾರವಾಗಿ ನೀಡಿದ್ದ ಪ್ರತಿಕ್ರಿಯೆ ವಿವಾದದ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಅವರು ಈ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು.
ಅಂದು ಪಾಪ ಕುಮಾರಸ್ವಾಮಿ ಯವರು ಸ್ವಾಮೀಜಿ ಪ್ರೊಗ್ರಾಂಗೆ ಹೋಗಿದ್ರು. ಅವರು ವಾಪಸ್ ಬರುವಷ್ಟರಲ್ಲಿ ಇಲ್ಲಿ ಆಪರೇಷನ್ ಕಮಲ ಮುಗಿದು ಹೋಗಿತ್ತು. ಸ್ವಾಮೀಜಿ ಯವರಿಗೂ ಒಕ್ಕಲಿಗ ಒಬ್ಬ ಸಿಎಂ ಆಗಿದ್ದಾನೆ ಅಂತ ಅಭಿಮಾನ. ನಮಗೂ ಅಭಿಮಾನ, ನಿಮಗೂ ಅಭಿಮಾನ ಅಲ್ವಾ? ಅದಕ್ಕೆ ಯಾರು ಸರ್ಕಾರ ತೆಗೆದರೋ ಅವರನ್ನೇ ಜೊತೆಗೆ ಹಾಕಿಕೊಂಡು ಓಡಾಡಿದ್ರೆ? ಹೇಗೆ ಎಂದು ಪ್ರಶ್ನಿಸಿದರು.
Old Pension Scheme: ಸರ್ಕಾರಿ ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ಹಳೆಯ ಪಿಂಚಣಿಗೆ ಮಹತ್ವದ ಆದೇಶ
ಚೆಲುವರಾಯಸ್ವಾಮಿ ಕೃಷ್ಣ ಭೈರೇಗೌಡ ಕೂಡ ಸ್ವಾಮೀಜಿ ಹತ್ರ ಹೋಗಿ ಆಶೀರ್ವಾದ ಪಡೆದುಕೊಂಡರು. ಹಿರಿಯರ ಆಶೀರ್ವಾದ ಬೇಕಲ್ಲ ಅದರಲ್ಲಿ ತಪ್ಪೇನಿಲ್ಲ. ಕುಮಾರಸ್ವಾಮಿ ಆಶೀರ್ವಾದ ಕೇಳಿದ್ರಲ್ಲಿ ತಪ್ಪು ಅಂತ ಹೇಳಲ್ಲ, ಮಂಜುನಾಥ್ ಆಶೀರ್ವಾದ ಕೇಳಲಿ ತಪ್ಪು ಅಂತ ಹೇಳಲ್ಲ. ಆದರೆ ಬೆನ್ನಿಗೆ ಚೂರಿ ಹಾಕಿದ್ರಲ್ಲ ಅವರನ್ನು ಕರೆದುಕೊಂಡು ಹೋದ್ರೆ, ಯಾರು ಸರ್ಕಾರ ತೆಗೆದ್ರಲ್ಲ ಅವರನ್ನೆಲ್ಲ ಕರೆದುಕೊಂಡು ಹೋದರೆ ಸಮಾಜಕ್ಕೆ ಏನಂತ ಉತ್ತರ ಕೊಡ್ತಾರೆ ಇವರು ಅಂತ ಅಷ್ಟೇ ಎಂದರು.