ಬಳ್ಳಾರಿ:- ನನ್ನ ಬಗ್ಗೆ ಯಾರೆ ಮಾತಾಡಿದರೂ ಕಾಮೆಂಟ್ ಮಾಡಲ್ಲ ಎಂದು ಸಚಿವ ಬಿ ಶ್ರೀ ರಾಮುಲು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಮಾಡುವುದಕ್ಕೋಸ್ಕರ ಎಂದ ಶ್ರೀರಾಮುಲು, ಯಾರೇನೇ ಟೀಕೆ ಮಾಡಿದರೂ, ತನ್ನ ವಿರುದ್ಧ ಯಾರೆಷ್ಟೇ ದ್ವೇಷ ಕಾರಿದಾಗ್ಯೂ ಈ ಚುನಾವಣೆಯಲ್ಲಿ ಗೆದ್ದರೆ ಅದೇ ಅವರಿಗೆ ತಕ್ಕ ಉತ್ತರ ಕೊಟ್ಟಂತೆ ಎಂದು ಹೇಳಿದರು. ವಿರೋಧಿಗಳು ಮಾತ್ರ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಾರೆ, ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ್ಯಾರೂ ಮಾಡಲಾರರು. ಆದರೆ ಜನ ಅಥವಾ ಮತದಾರರು ತಮ್ಮ ಪರವಾಗಿ ನಿಂತಾಗ ಅದರ ಮುಂದೆ ಷಡ್ಯಂತ್ರ, ಕುತಂತ್ರಗಳೆಲ್ಲ ಕೊಚ್ಚಿಕೊಂಡು ಹೋಗುತ್ತವೆ ಎಂದು ಶ್ರೀರಾಮುಲು ಹೇಳಿದರು.