ಬೆಂಗಳೂರು: ನಗರದಲ್ಲಿ ಪುಂಡರ ಪುಂಡಾಟ ಹೆಚ್ಚಾಗಿದೆ. ಪೊಲೀಸ್ರ ಮೇಲಿನ ಭಯವಿಲ್ಲದೆ ಅಮಾಯಕರ ಮೇಲೂ ಮಾರಾಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗ್ತಿದ್ದಾರೆ. ಬಾರಲ್ಲಿದ್ದವನ್ನ ಹೊರಗೆ ಎಳೆತಂದು ಕುತ್ತಿಗಡ ಕುಯ್ದಿದ್ದಾರೆ ಕಿಡಿಗೇಡಿಗಳು. ಮೊಬೈಲ್ ಟಾರ್ಚ್ ಹಾಕಿ ಕತ್ತಿಗೆ ಚಾಕು ಹಾಕಿ ಎಸ್ಕೇಪ್ ಆಗಿದ್ದಾರೆ.
ತನಗೆ ಸಂಬಂಧವೇ ಇಲ್ಲದೆ ಹಲ್ಲೆಗೊಳಗಾದ ಯುವಕ ಆಸ್ಪತ್ರೆಯಲ್ಲಿ ಪರಿತಪಿಸಿದ್ದಾನೆ. ಮಿಥುನ್ ಎಂಬಾತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದ್ದು,ಬಾರ್ ನಲ್ಲಿ ಕೂತಿದ್ದವನ ಹೊರಗೆಳೆದು ಹಲ್ಲೆ ನಡೆಸಲಾಗಿದೆ. ಮಿಥುನ್ ಸ್ನೇಹಿತ ಅರ್ಜುನ್ ಜೊತೆ ಬಾರ್ ಗೆ ಬಂದಿದ್ದ. ಬಾರ್ ಮುಂದೆ ಗಲಾಟೆ ನಡೆಯುತ್ತಿದ್ದನ್ನು ನೋಡಿ ಮಿಥುನ್ ಮತ್ತು ಅರ್ಜುನ್ ಬಾರ್ ಒಳಗೆ ಹೋಗಿದ್ದಾರೆ. ಬಾರ್ ನಲ್ಲಿ ಮಂದ ಬೆಳಕಿದ್ದ ಕಾರಣ,
ಎಲೆಕೋಸನ್ನ ವಾರಕ್ಕೊಮ್ಮೆ ತಿನ್ನೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?
ಒಳ ಬಂದ ಪುಂಡರು ಮೊಬೈಲ್ ಟಾರ್ಚ್ ಹಾಕಿ ಹುಡುಕಾಟ ನಡೆಸಿದ್ದಾರೆ. ಮೊದಲು ಅರ್ಜುನ್ ಗೆ ಮೊಬೈಲ್ ಟಾರ್ಚ್ ಹಾಕಿದ್ದ ಅಪರಿಚಿತರು, ಇವನಲ್ಲ ಎಂದು ಮಿಥುನ್ ಗೆ ಟಾರ್ಚ್ ಹಾಕಿ ಇವನೇ ಎಂದು ಹೊರಗೆ ಎಳೆ ತಂದು ಹಲ್ಲೆ ನಡೆಸಿದ್ದಾರಂತೆ. ನಾನು ಗಲಾಟೆ ಮಾಡಿದವನ ಜೊತೆ ಇದ್ಯ ಎಂದು ಹಲ್ಲೆ ಎಂದು ಗಲಾಟೆ ಮಾಡಿ ಚಾಕುವಿನಿಂಸ ಗುತ್ತಿಗೆ ಇರಿದಿದ್ದಾರೆ. ಈ ಬಗ್ಗೆ ಆರ್ ಟಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ಆರೋಪಿಗಳಿಗಾಗಿ ಪೊಲೀಸ್ರು ಹುಡುಕಾಟ ನಡೆಸುತ್ತಿದ್ದಾರೆ.