ಸತತ 6 ಗೆಲುವಿನೊಂದಿಗೆ ರಾಯಲ್ ಆಗಿ ಪ್ಲೇಆಫ್ಗೆ ಎಂಟ್ರಿಕೊಟ್ಟಿರುವ ಆರ್ಸಿಬಿ ಕಪ್ ಗೆಲ್ಲುವ ಎನ್ನುವ ಆತ್ಮವಿಶ್ವದಲ್ಲಿದೆ. ಆದರೆ ಐಪಿಎಲ್ ಮೊದಲಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡಿ ಇದೀಗ ಸತತ 4 ಪಂದ್ಯಗಳನ್ನು ಸೋತು ಅಗ್ರಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದು ಪ್ಲೇಆಫ್ಗೆ ತಲುಪಿರುವ ರಾಜಸ್ಥಾನಕ್ಕೆ ಈ ಪಂದ್ಯ ಇನ್ನಷ್ಟು ಕಠಿಣವಾಗಲಿದೆ
ಪದವೀಧರ ಕ್ಷೇತ್ರದಿಂದ ರಘುಪತಿ ಭಟ್ ಗೆಲುವು ನಿಶ್ಚಿತ -ಈಶ್ವರಪ್ಪ
ಅಲ್ಲದೇ ಈಗಾಗಲೇ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ ತವರಿಗೆ ವಾಪಸ್ಸಾಗಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಆದರೆ ವಿಲ್ ಜ್ಯಾಕ್ಸ್ ನಿರ್ಗಮನದ ಬಳಿಕವೂ ಆರ್ಸಿಬಿ ತಂಡ ತನ್ನ ಕೊನೆಯ ಪಂದ್ಯದಲ್ಲಿ ಉತ್ತಮವಾಗಿ ಪ್ರದರ್ಶನ ನೀಡುವ ಮೂಲಕ 7ನೇ ಗೆಲುವಿಗಾಗಿ ಕಾತುರವಾಗಿದೆ. ಇನ್ನೂ ಫೈನಲ್ನಲ್ಲಿ ಆರ್ಸಿಬಿ ತಂಡಕ್ಕೆ ಎಸ್ಆರ್ಹೆಚ್ ಅಥವಾ ಕೆಕೆಆರ್ ನಡುವೆ ಯಾವ ತಂಡ ಎದುರಾದ್ರೆ ಕಷ್ಟ ಅಂತ ಅಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ. ಆರ್ಸಿಬಿ ಪಕ್ಕಾ ಫೈನಲ್ಗೆ ಹೋಗುತ್ತೆ ಅಂತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಆರ್ಸಿಬಿ ಯಾವ ಫಾರ್ಮ್ನಲ್ಲಿದೆ ಅಂತ ಹೇಳಬೇಕಿಲ್ಲ. ಯಾವುದೇ ತಂಡ ಇದ್ರು ಹೊಡೆದು ಮುನ್ನುಗ್ಗೋ ಸ್ಥಿತಿಯಲ್ಲಿದೆ. ಆದರೆ ಆರ್ಸಿಬಿಯಲ್ಲಿ ಒಂದೇ ಸಮಸ್ಯೆ ಅದು ಬೌಲಿಂಗ್. ಅದೂ ಕೂಡ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಫಾರ್ಮ್ಗೆ ಮರಳಿದೆ. ಇಂಥ ಸಮಯದಲ್ಲಿ ಯುದ್ಧಕ್ಕೆ ಅಂತ ನಿಂತಮೇಲೆ ಸೈನ್ಯ ಲೆಕ್ಕ ಹಾಕಬಾರದು ಅನ್ನೋ ಥರ ಯುದ್ಧಕ್ಕೆ ಅಂತ ನಿಂತಿದ್ದೀವಿ, ಯಾವುದೇ ತಂಡ ಬಂದ್ರೂ ಹೊಡೀತಿವಿ ಅಂತಿದ್ದಾರೆ ಫ್ಯಾನ್ಸ್. ಆದರೆ ಕೆಲ ಅಭಿಮಾನಿಗಳು ಪ್ರಕಾರ ಕೆಕೆಆರ್ ಆರ್ಸಿಬಿಗೆ ಎದುರಾದ್ರೆ ಕೊಂಚ ಕಷ್ಟ ಆಗಬಹುದು ಎನ್ನಲಾಗ್ತಿದೆ. ಯಾಕಂದ್ರೆ ಕೆಕೆಆರ್ ತಂಡ ಸೀಸನ್ ಆರಂಭದಿಂದಲೂ ಬಿಲಿಷ್ಠವಾಗಿದೆ. ಇನ್ನೂ ನಾಳೆ ಆರ್ಸಿಬಿ ರಾಜಸ್ಥಾನ ರಾಯಲ್ಸ್ ವಿರುದ್ಧ ಎಲಿಮನೇಟರ್ ಪಂದ್ಯವಾಡ್ತಿದೆ
![](https://ainlivenews.com/wp-content/uploads/2024/01/Ad-Banner-copy-scaled.jpg)