ಬೆಳಗಾವಿ: ವಿಷ ಕನ್ಯೆ ಎಂಬ ಪದ ಬಳಿಕೆ ಮಾಡಿರುವ ರಮೇಶ್ ಜಾರಕಿಹೊಳಿ ಅವರ ಹೇಳಿಕೆಗೆ ನಾನು ಉತ್ತರ ಕೊಡುವುದಿಲ್ಲ. ಅವರ ಸಂಸ್ಕೃತಿ ಎಂಥದ್ದು ಎಂದು ರಾಜ್ಯದ ಜನರು ನೋಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ನಾನು ಅವರ ಹೇಳಿಕೆಗೆ ಉತ್ತರ ಕೊಡುವುದಿಲ್ಲ.
ಜನರೇ ತಕ್ಕ ಉತ್ತರ ಕೊಡುತ್ತಾರೆ. ಭಾರತ ದೇಶದ ಸಂಸ್ಕೃತಿಯಲ್ಲಿ ವಿಶ್ವಾಸ ಇಟ್ಟವರು ನಾವು. ಅವರು ವಿಷ ಕನ್ಯೆ ಅಂತಾರೋ, ಇನ್ನೊಂದು ಕನ್ಯೆ ಅಂತಾರೋ ಅವರು ಏನೂ, ಸಂಸ್ಕೃತಿ ಏನು ಎನ್ನುವುದು ಇಡೀ ರಾಜ್ಯದ ಜನರು ನೋಡಿದ್ದಾರೆ. ಅವರ ಸಂಸ್ಕೃತಿ ಬಗ್ಗೆಯೂ ನೋಡಿದ್ದಾರೆ. ಅವರು ದೊಡ್ಡವರು ಅವರ ಬಗ್ಗೆ ಮಾತನಾಡಲ್ಲ ” ಎಂದರು.
![Demo](https://ainlivenews.com/wp-content/uploads/2023/12/spoorthi-1.jpg)
Yes Bank Lays Off: 500 ನೌಕರರನ್ನು ಕೆಲಸದಿಂದ ವಜಾಗೊಳಿಸಿದ Yes ಬ್ಯಾಂಕ್..! ಕಾರಣ ಹೀಗಿದೆ..
” ನಮ್ಮ ಬಳಿ ಎಲ್ಲಿ ದುಡ್ಡು ಇದೆ. ನಾನು ಹೆಸರಿಗಷ್ಟೇ ಲಕ್ಷ್ಮೀ ನನ್ನ ಬಳಿ ಹಣ ಇಲ್ಲ. ಅವರಿಗೆ ಸಾಹುಕಾರ್ ಅಂತಾರೆ, ನಮ್ಮ ಬಳಿ ಎಲ್ಲಿ ದುಡ್ಡು ಬರಬೇಕು. ಸಾಹುಕಾರಗಳು ಅವರಲ್ವಾ ಎಂದು ಲೇವಡಿ ಮಾಡಿದರು. ನಾನು ಯಾರ ಬಳಿಯಾದರೂ ಬಳಿ ಹಣ ತೆಗದುಕೊಂಡಿದ್ದರೆ ದಾಖಲೆ ಕೊಡಲಿ ಆಮೇಲೆ ಮಾತನಾಡುತ್ತೇನೆ ” ಎಂದರು.
![](https://ainlivenews.com/wp-content/uploads/2024/01/Ad-Banner-copy-scaled.jpg)